ಸೋಮವಾರ, ನವೆಂಬರ್ 22, 2021

ಬಾಳಿದೇತಕೆ (ಕವಿತೆ) - ತುಳಸಿದಾಸ ಬಿ. ಎಸ್.

ದೇವರಿಲ್ಲದ ಗುಡಿಯು
ತಾಯಿಯಿಲ್ಲದ ಕುಡಿಯು
ಚೋಮನಿಲ್ಲದ ದುಡಿಯ
ಹಾಗೆ ನನ್ನೀ ಬದುಕೆ ಶೋಕ ಸಾಗರ

ಅನ್ನವಿರದ ಮನೆಯು
ಬಣ್ಣ ಮಾಸಿದ ಬಟ್ಟೆ
ಎಣ್ಣೆ ಕಾಣದ ನೆತ್ತಿ
ಗೇಣೆ ಸೋರುವ ಸೂರು ಎಲ್ಲ ಸಹಿಸಿದೆ

ಮೆಚ್ಚಿದ ನನಗಾಗಿ 
ಹುಚ್ಚಿಯಾಗಿ ಬಂದೆ
ಇಚ್ಛೆಯಂತೆ ಬದುಕಿ
ಸ್ವಚ್ಛ ಪ್ರೇಮವ ನೀಡಿ ಪರ ಲೋಕ ನೀ ಹೇಗೆ ಬೇಗ ಸೇರಿದೆ

ಸಿಡಿಲಿ ಬಡಿದಿದೆ ಮನಕೆ
ಒಡಲೊಳಾರದು ಕಿಚ್ಚು
ಕುಡಿಗಳೆಳೆಯರು ಇನ್ನು
ನಡೆದೆ ಎಲ್ಲರನಗಲಿ ನೀನಿರದ ಭುವಿಯಲ್ಲಿ ಹೇಗೆ ಬದುಕಲಿ

ಜಗವೂ ನಗಲೂ ಇಲ್ಲ
ಮತ್ತೆ ಅಳಲೂ ಇಲ್ಲ
ನೋವು ನುಂಗುತ ಬೆಳೆದೆ
ಸಾವು ಗೆಲ್ಲದೆ ಸೋತೆ ಬೇವಿನಂತ ಕಹಿ ಬಾಳಿದೇತಕೆ
                             
 - ತುಳಸಿದಾಸ ಬಿ. ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...