ಭಾನುವಾರ, ನವೆಂಬರ್ 14, 2021

ಇನಿಯನಿಗಾಗಿ ಕಾಯುತಿರುವ ಈ ಪುಟ್ಟ ಜೀವ (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ನನ್ನ ಹೃದಯದರಮನೆಯ ಪ್ರೀತಿಯ ಇನಿಯ, 
ಈ ಮನ ಬಯಸುತಿದೆ ನಿನ್ನ  ಪ್ರೀತಿಯ,
ಈ ಹೃದಯಕೆ ನೀಡುವೆಯಾ ಪ್ರೀತಿಯ ಅಪ್ಪುಗೆಯ, 
ಓ ನನ್ನ ಪ್ರೀತಿಯ ಗೆಳೆಯ... 

ಮನಸು ಬಯಸುತಿಹುದು ನಿನ್ನ, 
ಬಯಸಿಹೆ ನಾ ಮಾತುಕತೆಯ ಭಾವನೆಗಳೊಂದಿಗಿನ ಮಿಲನ, 
ಈ ಯಾನ ಸಾಗುತಿರಬೇಕು ದಿನ-ಪ್ರತಿದಿನ, 
ಪ್ರತಿದಿನ ಕಾಣುತ್ತಿರುವೆ ನಾ ನಿನ್ನದೇ ಕನಸನ್ನ... 

ನಿನ್ನ ಕಾಣದೇ ಒಂಟಿಯಾಗಿ ಪರಿತಪಿಸುತಿರುವ, 
ಈ ಪುಟ್ಟ ಜೀವ, 
ಪ್ರತಿಕ್ಷಣ ನನ್ನೆದೆ ಬಡಿದುಕೊಳ್ಳುತಿಹುದು ಢವ-ಢವ, 
ನಿನದೇ ನೆನಪುಗಳ ಅಳುಕಿನ ಭಾವ.. 

ನನ್ನ ಒಲವೇ ನೀನೊಮ್ಮೆ ಬಂದರೆ ಶರಣಾಗುವೆ ನಿನಗೆ ಸೋತು, 
ಕೂರುವೆ ನಾ ನಿನ್ನ ಬೆನ್ನಹತ್ತು, 
ಒರಗುವೆ ನಿನ್ನ ಮಡಿಲಲ್ಲಿ ಕ್ಷಣಹೊತ್ತು - ಅದೇ ಎನಗೆ ಮುತ್ತು, 

ನಿನ್ನಿಂದ ಬಯಸಲಾರೆ ಚಿನ್ನ-ಒಡವೆ, ವೈಡೂರ್ಯ, ಮುತ್ತು-ಹವಳ-ಹರಳು, 
ನಿನ್ನ ಅಪ್ಪುಗೆಯ ಆ ಆಲಿಂಗನದ ಆನಂದದ ಕ್ಷಣಗಳು, 
ತುಂಬಿ ಬರುವವು ಎನ್ನ ಕಣ್ಣ ಕಂಬನಿಗಳು,
ನೀನೇ ಆಸರೆಯಾಗುವೆ ಎಂದು ನಂಬಿರುವವಳು, 
ನನ್ನಂತೆ ಇನಿಯನಿಗಾಗಿ ಪರಿತಪಿಸುತಿರುವ ಅವೆಷ್ಟೋ ಜೀವಗಳು, 

ಈ ಮುದುಡಿದ ತಾವರೆಯ ಅರಳಿಸು-ಸಂತೈಸು, 
ಬಂದು ಮೆಲ್ಲ ಮಾತಾಡಿ- ಸ್ಪರ್ಶಿಸಿ ಈ ಜೀವವ ಉಳಿಸು, 
ನೀನಾಗು ನನ್ನ ಹೃದಯದರಮನೆಯ ಅರಸು.... 
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...