ಭಾನುವಾರ, ನವೆಂಬರ್ 14, 2021

ಗಜಲ್ - ಮಾಜಾನ್ ಮಸ್ಕಿ.

ಹೃದಯ ಹೃದಯಗಳ ಮಿಲನ ಎಂದಾಯಿತು ಕೇಳಬೇಡ ಸುಮ್ಮನಿರು 
ತಿಳಿದೋ ತಿಳಿಯದೆ ಬೆರೆತಿರುವೆ ಏಕೆ ಹೀಗಾಯಿತು ಕೇಳಬೇಡ ಸುಮ್ಮನಿರು 

ಅರಿಯದ ಮನಕ್ಕೆ ಜೊತೆಯಾಗಿರುವೆ ನೀನು ಸದಾ 
ಸ್ಪಂದನೆ ಇಲ್ಲದೇ ಸ್ಪಂದಿಸಿದೆ  ಏನಾಯಿತು ಕೇಳಬೇಡ ಸುಮ್ಮನಿರು  

ಘನೀಕರಿಸಿದ ಭಾವನೆ ಕರಗಿದ ಮೋಡವಾಗಿರುವೆ ನೀ 
ಪ್ರತಿ ಸಂಜೆಯ ಸಿಂಧೂರ ಹೇಗಾಯಿತು ಕೇಳಬೇಡ ಸುಮ್ಮನಿರು 

ನೀನಿಟ್ಟ ಮುತ್ತುಗಳಲ್ಲಿ ಬದುಕುತ್ತಿರುವೆ ನಾನು ಕೊರಳ ಹಾರ ಯಾಕಾಯಿತು ಕೇಳಬೇಡ ಸುಮ್ಮನಿರು 

ನೆನಪುಗಳು ಕನಸುಗಳು ಬೆರೆತು ಒಂದಾಗಿವೆ *ಮಾಜಾ*
ಪ್ರೀತಿಯ ಮಹಲು ಯಾವಾಗಾಯಿತು ಕೇಳಬೇಡ ಸುಮ್ಮನಿರು 
- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...