ಭಾನುವಾರ, ನವೆಂಬರ್ 14, 2021

ಕಲ್ಪನಾ ಕನ್ಯೆ ( ಕವಿತೆ) - ಭವ್ಯ ಟಿ.ಎಸ್.

ನಿನ್ನ ಕಾಡಿಗೆ ಕಂಗಳ ಮೋಡಿಗೆ ಸೋತೆ ಈ ದಿನ
ಕಣ್ಣ ಕಾಂತಿಯಲಿ ಬಾಳ ಬೆಳಕ ಕಂಡೆ ನಾ
ಮನದಿ ಮೂಡಿದ ಕಲ್ಪನೆಯ ಕನ್ಯೆ ನೀನೇನಾ
ಹೃದಯವ ನೋಟದಲ್ಲೇ ಕದ್ದ ಚೆಲುವೆ ನೀನಾ 

ಮತ್ತೆ ಮತ್ತೆ ನೋಡಲು ಕರೆದಿವೆ ನಯನಗಳು
ಕಾರ್ಮೋಡದಂತೆ ಕವಿದಿವೆ ಆ ಮುಂಗುರುಳು
ಪದಗಳಿಲ್ಲದ ಕವಿ ನಾನೀಗ ನಿನ್ನ ವರ್ಣಿಸಲು
ಮರೆಯಲಾರದ ನೆನಪುಗಳ ಹೂಗೊಂಚಲು

ಸೆಳೆವ ಮಿಂಚಿನ ಕಣ್ಣುಗಳ ಚೆಲುವಿನೊಡತಿಯೇ
ಪ್ರತಿಕ್ಷಣವೂ ಎದೆಬಡಿತದಂತೆ ಬೆರೆತ ಸ್ಫೂರ್ತಿಯೇ
ಬಯಕೆಗಳ ಚಿಗುರೊಡೆಸಿದ ಜೀವನ ಸಂಗಾತಿಯೇ
ಪ್ರೇಮಲೋಕದಿ ಕಂಗೊಳಿಸುವ ರೂಪರತಿಯೇ

 ಕಂಗಳೆಂಬ ಹೂಬನದಲ್ಲಿ ವಿಹರಿಸುವ ಭ್ರಮರ
ಸೌಂದರ್ಯದ ಮಕರಂದ ಸವಿದಷ್ಟೂ ಮಧುರ
ಪ್ರೇಮಾನುಭೂತಿ ಮಿಡಿದ ನಯನಗಳೇ ಸಾಗರ
ಬೆಳದಿಂಗಳ ತಂಪೆರೆದ ಮುಗ್ಧಮೊಗದ ಚಂದಿರ

- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...