ಸೋಮವಾರ, ನವೆಂಬರ್ 22, 2021

ಮಕ್ಕಳ ಸ್ವಭಾವ ಮತ್ತು ತಂದೆ ತಾಯಿಯ ಪ್ರೀತಿ - ರಾಜು ಬೈರೆಡ್ಡಿ ಗೋಗಿ.

ಮಕ್ಕಳು ಎಂದರೆ  ಹೂ ತೋಟದಲ್ಲಿರುವ ಮೊಗ್ಗುಗಳಂತೆ ನಾವು ಜೋಪಾನವಾಗಿ ನೋಡಿಕೊಳ್ಳಬೇಕು ಏಕೆಂದರೆ ಅವು ಮುಂದಿನ ನಮ್ಮ ಭವ್ಯ ಭಾರತದ ಪ್ರಜೆಗಳು. ಮಕ್ಕಳು ಎಂದರೆ ದೇವರ ಸಮಾನ ಅವರು ಯಾವತ್ತಿಗೂ ಕೂಡ ಸುಳ್ಳು ಮಾತನ್ನು ಆಡಲು ಹಿಂಜರಿಯುತ್ತಾರೆ ಈಗಿನ ಮಕ್ಕಳು ಬರೀ ಮೊಬೈಲ್ ಫೋನ್ಗಳನ್ನು ಹಿಡಿದು ಅದರಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ  ಪಾಲಕರಂತೆ ಮಕ್ಕಳು ಕೂಡ ಅವರನ್ನೇ ಅನುಸರಿಸುತ್ತಾರೆ ನೀವು ಪುಸ್ತಕ ಹಿಡಿದು ಓದುತ್ತಾ ಕುಳಿತರೆ ನಿಮ್ಮ ಮಕ್ಕಳು ಕೂಡ ಪುಸ್ತಕವನ್ನು ಹಿಡಿಯುತ್ತಾರೆ ನೀವು ಮೊಬೈಲ್ ಫೋನ್ ಹಿಡಿದುಕೊಂಡು ಕುಳಿತರೆ ಮಕ್ಕಳ ಕೂಡ ಫೋನನ್ನು ಹಿಡಿದುಕೊಂಡು ಕೊಡುತ್ತಾರೆ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುವುದಿಲ್ಲ ಆದರೆ ನಿಮ್ಮನ್ನು ಅನುಸರಿಸುತ್ತಾರೆ ಹಿಂದಿನ ಕಾಲದಲ್ಲಿ ಮಕ್ಕಳು ಬುಗುರಿ ಚಿನ್ನಿದಾಂಡು ಕುಂಟೆಬಿಲ್ಲೆ ಗೋಲಿ ಇನ್ನಿತರ ಆಟಗಳನ್ನು ಮೈದಾನದಲ್ಲಿ ಆಡುತ್ತಿದ್ದರು ಆದರೆ  ಈಗಿನ ಮಕ್ಕಳು ಬರೆ ಮೊಬೈಲ್ ಫೋನ್ನಲ್ಲಿ ವಿಡಿಯೋಗೇಮ್ ಆಡುವುದರ ಮೂಲಕ ತಮ್ಮನ್ನು ತಾವೇ ಹಾಳುಮಾಡಿಕೊಂಡು ತಮ್ಮ ಗ್ರಹಿಕೆಯನ್ನು ಕೂಡ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಒಬ್ಬ ಹುಡುಗ ಶಾಲೆಗೆ ಹೋಗುತ್ತಿರಬೇಕಾದರೆ ಅವನು ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ಹೋಗಬೇಕಾದರೆ ಅವನಿಗೆ ದಾರಿಯ ಮಧ್ಯೆ ಫೋನ್ ಬಿಟ್ಟಿರುವುದನ್ನು ನೆನಪಿಸಿಕೊಳ್ಳುತ್ತಾನೆ ಆಗವನು ಹಿಂದುರಿಗಿ ಮೊಬೈಲನ್ನು ತೆಗೆದುಕೊಂಡು ಮರಳಿ ಮತ್ತೆ ತರಗತಿಗೆ ಹಿಂದಿರುಗುತ್ತಾನೆ ಇದರಿಂದಲೇ ನಾವು ತಿಳಿದು ಕೊಳ್ಳಬೇಕಾದದ್ದು ಏನೆಂದರೆ ಮೊಬೈಲ್ ಫೋನ್ ಇಲ್ಲದೆ ನಮ್ಮ ಜೀವನವೇ ಇಲ್ಲ ಎಂಬಂತಾಗಿದೆ ಅದಕ್ಕಾಗಿ ಪೋಷಕರು ಮಕ್ಕಳಿಗೆ ಆ ಚಟವನ್ನು ಬಿಡಿಸಿ ಅವರಿಗೆ ಓದಲು ಒಳ್ಳೆಯ ಪುಸ್ತಕ ಒಳ್ಳೆ ಕಥಾಸಂಕಲನ ಒಳ್ಳೆಯ ಕಾದಂಬರಿ ದಿನನಿತ್ಯದ ದಿನಪತ್ರಿಕೆ ಇನ್ನಿತರ ಹಲವಾರು ಪುಸ್ತಕಗಳನ್ನು ಅವರಿಗೆ ಕೊಡಬೇಕು ಏಕೆಂದರೆ ಮಕ್ಕಳು ನಮ್ಮ ಮುಂದಿನ ಭವ್ಯ ಭಾರತದ ಸಂಸ್ಕೃತಿ ಪರಂಪರೆ ಪ್ರಜಾಪ್ರಭುತ್ವವನ್ನು ಉಳಿಸಲು ಅವರಿಗೆ ಆ ಜ್ಞಾನ ಅತ್ಯವಶ್ಯಕ ಬರಿ ನೀವು ಮನೆಯ  ಮಕ್ಕಳಾಗದೆ.  ನಿಮ್ಮ  ತಂದೆ-ತಾಯಿಯ ಮಕ್ಕಳಾಗದೆ ದೇಶದ ಮಕ್ಕಳಾಗಿ ಭಾರತಮಾತೆಯ ಮಕ್ಕಳಾಗಿ ದೇಶದ ಆಚಾರ ವಿಚಾರ ಬಗ್ಗೆ ಚಿಂತನೆ ಮಾಡಿ ತಂದೆ-ತಾಯಿಯರನ್ನು ದೇವರನ್ನು ಕಾಣಲು ತಂದೆ-ತಾಯಿ ನಮಗೆ ದೇವರು ಕೊಟ್ಟ ವರ ಅವರನ್ನು ನಾವು ಬಚ್ಚಿಟ್ಟುಕೊಂಡು ನಮ್ಮ ಮನದಂಗಳದಲ್ಲಿ ಕಾಪಾಡಿಕೊಳ್ಳಬೇಕು ಅವರು ನಿಮ್ಮನ್ನು ಎಳೆಯ ವಯಸ್ಸಿನಿಂದ ಹಿಡಿದು ಮುಪ್ಪಿನವರೆಗೆ ನಿಮ್ಮ ಭುಜಕ್ಕೆ ಭುಜ ಕೊಟ್ಟು ನಿಮ್ಮನ್ನು ಸಾಧನೆಯ ಹಾದಿಯತ್ತ ಕೊಂಡೊಯ್ಯಲು ಅವರು ಹಗಲಿರುಳು ಶ್ರಮಿಸಿ ನಮ್ಮನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿ ಅವರು ನಮ್ಮಲ್ಲಿ ಖುಷಿಯನ್ನು ಕಾಣುತಾರೆ ಆಗ ನಾವು ಅವರನ್ನು ಅವರ ಮುಪ್ಪಿನ ಸಮಯದಲ್ಲಿ ಅವರನ್ನು ಅವರು ನಮಗೆ ಹೇಗೆ ನೋಡಿಕೊಂಡಿದ್ದಾರೆ ಹಾಗೆ ನಾವು ಅವರಿಗೆ ಮಕ್ಕಳಂತೆ ಕಾಣಬೇಕು ಅವರನ್ನು ಆಶ್ರಮಕ್ಕೆ ಸೇರಿಸಲಾಗಿದೆ ನಿಮ್ಮ ಮನೆಯಲ್ಲಿ ಅವರನ್ನು ಸಾಕಿ ಸಲುಹಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ನೀವು ಚೆನ್ನಾಗಿ ನೋಡಿಕೊಂಡರೆ ನಮ್ಮ ದೇಶದಲ್ಲಿ ಯಾವ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ ಬರಿ ನೆನಪು ಮಾತ್ರ ಅದಕ್ಕಾಗಿ ತಂದೆ-ತಾಯಿಯರನ್ನು ನೋಯಿಸದೆ ಅವರ ಮಾತಿಗೆ ಮತ್ತು ಅವರ ಆಸೆಯನ್ನು ಪೂರೈಸಲು ನಾವು  ಹಗಲಿರುಳು ಶ್ರಮಿಸಿ ಅವರಿಗೆ ನಾವು ಮುಖದಲ್ಲಿ ಮಂದಹಾಸವನ್ನು ಮೂಡಿಸುವುದು ನಮ್ಮ ಆಧ್ಯ ಕರ್ತವ್ಯ ಆ ಕರ್ತವ್ಯವನ್ನು ನಾವು ನೀವು ತಪ್ಪದೆ ಮಾಡೋಣ ಮತ್ತೆ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳೋಣ ಎಂದು ಈ ಮೂಲಕ ಪ್ರತಿಜ್ಞೆ ಮಾಡೋಣ ಮಕ್ಕಳು ನಮ್ಮಪ್ಪ ನಮ್ಮ ಆಸೆ ಪೂರೈಸು ಎಂದು ಸದಾ ಕನಸು ಕಾಣುತ್ತಿರುವ ನನ್ನ ತಂದೆ-ತಾಯಿಯರಿಗೆ ನಾನು ಹೇಳುವುದಿಷ್ಟೇ ಚಿಂತೆ ಮಾಡಬೇಡಿ ಅಮ್ಮ ಮಗ ಹಿಮಾಲಯ ಪರ್ವತದೇತ್ಖರಕ್ಕೆ ಬೆಳೆದು ಎಲ್ಲರಿಂದಲೂ ಒಳ್ಳೆಯದನ್ನು ಸ್ವೀಕರಿಸುತ್ತಾನೆ.
- ರಾಜು ಬೈರೆಡ್ಡಿ ಗೋಗಿ, ತಾ/ ಶಹಾಪುರ ಜಿ/ ಯಾದಗಿರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...