ಸೋಮವಾರ, ನವೆಂಬರ್ 22, 2021

ಹೃದಯ ಚೂರಾಯಿತು (ಕವಿತೆ) - ಶ್ರೀ ಇಂಗಳಗಿ ದಾವಲಮಲೀಕ.

ಯಾಕೋ ನನಗೆ ಕುಡಿಯಬೇಕೆನಿಸಿತ್ತು ಮದ್ಯ
ಕುಡಿಯಲೆಂದು ಹೊರಟೆ ಅಂಗಡಿಯತ್ತ
ಅದುರ ತೊಡಗಿತು ಕಾಲು ತೊದಲಿತು ನಾಲಿಗೆ
ಕವಿಯುತಿತ್ತು ಕತ್ತಲೆ ಬಾಳಿಗೆ ಆದರೂ ಬೇಕಿತ್ತು

ಹೊರಟ ನಿಂತವನಿಗೆ ಬಿಗುಮಾನ ಗತ್ತು
ನಾನು ಕುಡಿಯುವೆನೆಂಬ ಗತ್ತು ಗಂಭೀರ
ಹೊತ್ತು ನಡೆದೆ  ಕತ್ತಗಲಿಸಿ ಕತ್ತಲೆಯಲಿ
ಅಂಧಕಾರದ ಬಲೆಯೊಳಗೆ ಸಿಕ್ಕಿ ಹಾಕಿ

ಬಾಳಲ್ಲಿ ಎದ್ದ ಬಿರುಗಾಳಿಯ ಹೊಡೆತಕ್ಕೆ
ಸಿಕ್ಕು ದಾಸನಾಗಿ ಬಿಟ್ಟೆ ಕುಡಿತದ ಚಟಕ್ಕೆ
ಅಪ್ಪ ಅಮ್ಮನಿಲ್ಲದ ಬಾಳಿನ ನೋವನ್ನು
ಕಂಡು ಉಣ್ಣಲು ಬಂದೆ ಅಂಗಡಿಗೆ

ಹೆಂಡತಿಯೆಂಬಳು ಕಂದನ ಕಟ್ಟಿಕೊಂಡು
ಹೆದರಿ ಬಿದ್ದಳು ತವರಿಗೆ ಎರವಾದಳು
ಹೆರವರಿಗೆ ಮತ್ತೆ ಕೆರವಾದಳು ಅಲ್ಲಿ
ತುತ್ತು ಕೂಳಿಗೂ ತಾತ್ಸಾರ ಮತ್ಸರದಿ

ಕಾಳ ಕತ್ತಲೆಯ ಮೂಲೆಯಲ್ಲಿ ಸಣ್ಣ
ಮಿಣುಕು ಹುಳು ಮಿಂಚಿ ಮರೆಯಾಯಿತು
ಗವ್ವೆನ್ನುವ ಕತ್ತಲು ಹೆಜ್ಜೆಯೊಂದ ಇಟ್ಟೆ
ಕಟ್ಟೆಯೊಡೆದು ಬಂತು ಮಹಾಪೂರ 

ಮೇಜಿನ ಹತ್ತಿರ ಕುಳಿತವನಿಗೆ ಬಂದನೊಬ್ಬ
ಕೈಯಲ್ಲೊಂದು ಪೆನ್ನು ಹಾಳೆಯ ಹಿಡಿದು
ಏನು ಬೇಕೆಂದು ಕೇಳಿ ಪಟ್ಟಿ ಮಾಡಿದ
ನೋಡಿದನೊಮ್ಮೆ ಕೆಂಡಗಣ್ಣುಗಲಿ ನನ್ನ

ಕೂಗಿ ಕರೆದೆ ಹೇಳಿದೆ ಮಾತೊಂದ ನೀ
ಇಲ್ಲಿಗೆ ಬರಬೇಡ ಆಗುವೆ ನನ್ನಂತೆ ನೀ
ಮಹಾ ಕುಡುಕ ಅವನಂದ ಮೊದಲು
ನೀ ಬಾರದಿರು ಮೆಲ್ಲಗೆ ಇಲ್ಲಿಗೆ 

ನಿನ್ನ ಮಗನಾಗುವನು ನನ್ನಂತೆ ಇಲ್ಲಿ
ಹೇಳಲೇನಿತ್ತು ಅಲ್ಲಿಗೆ ಬಂದೆ ನಡೆದು
ಮನೆಗೆ ಯಾರೂ ಇಲ್ಲ ನಾನು ಏಕಾಂಗಿ
ಹುಡಗನ ಮಾತಿಗೆ ಹೃದಯ ಚೂರಾಗಿತ್ತು.

- ಶ್ರೀ ಇಂಗಳಗಿ ದಾವಲಮಲೀಕ, ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...