ಸೋಮವಾರ, ನವೆಂಬರ್ 22, 2021

ನಮ್ಮ ಕನ್ನಡನಾಡು ಪುಣ್ಯಭೂಮಿ (ಕವಿತೆ) - ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.

ಕನ್ನಡನಾಡು ಎಷ್ಟು ಸೊಬಗು 
ಕನ್ನಡಾಂಬೆಯ ಮಡಿಲೇ ಹಾಲುಂಡ ತವರು
ಕನ್ನಡ ಎಂದರೆ ಮುಖದಲಿ ಅರಳುವುದು ನಗು
ಕನ್ನಡಾಂಬೆಯ ಸಿರಿಗೆ ಸಾಟಿಯಿಲ್ಲ ಯಾರು

ತುತ್ತ ತುದಿಯಲಿರುವ ಬೀದರಿನ ಅಂದ 
ಬಿಜಾಪುರದ ಗೋಳಗುಮ್ಮಟ  ಚಂದ
ಹಾವೇರಿ ಹಾನಗಲ್ ಶಿವಕುಮಾರ ಮಠ
ನಾಡಲಿ ಶುರು ಬೊಮ್ಮಾಯಿ‌ ಆಟ

ಮಂಗಳೂರು ಜನತೆಯ ಮುಗ್ಧತೆ
ಧರ್ಮಸ್ಥಳದ ಪಾವಿತ್ರ್ಯತೆ ಶುದ್ಧತೆ
ಕಾಯುತಿಹಳು  ದುರ್ಗಾಪರಮೇಶ್ವರಿ
ಹಸಿವ ನೀಗಿಸಿಹಳು ಅನ್ನಪೂರ್ಣೇಶ್ವರಿ

ಮಲೆನಾಡ ಸೊಬಗು ಕಣ್ಣಿಗೆ ತಂಪು
 ಶ್ರೀಧರಆಶ್ರಮ ಆತ್ಮದ್ಧೋರದ ಕಂಪು
ತೀರ್ಥಹಳ್ಳಿಯ ಕೋಗಿಲೆಯ ಇಂಪು
ಕನ್ನಡಕೆ ಕುವೆಂಪುರವರ ಚಾಪು

ರೇಷ್ಮೆನಾಡಿನ ಕಣ್ವಸೀಮೆಯ ವನ
ಮಂಡ್ಯದ ಸಕ್ಕರೆಯ ಮನಸಿನ ಜನ
ಪ್ರೀತಿಯ ಪ್ರತೀಕ ಹಾಸನದ ಜನ
ಜೀವಕೊಟ್ಟ ಚನ್ನಪಟ್ಟಣ(ಬೊಂಬೆನಾಡು)
 ಪ್ರೀತಿಕೊಟ್ಟ ಹಾಸನ(ಸೌಂದರ್ಯದ ನಾಡು)
ಸದಾ ಮಿಡಿಯುವುದು  ಮನ
- ಸಿದ್ದು ವಾಸುದೇವ್ ಬೊಂಬೆನಾಡು
ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...