ಬಾನಂಗಳದಿ ನೋಡಲು ಮನಮೋಹಕವು
ನೈಸರ್ಗಿಕವಾದ ಸೂರ್ಯಾಸ್ತಮಾನವು
ಭೂಮಿಗೆ ಬೆಳಕ ಚೆಲ್ಲಿ ತನ್ನ ಕಾರ್ಯ ಮುಗಿಸಿ
ಹೊರಟಿಹ ಆ ಭಾಸ್ಕರನು
ನಿತ್ಯ ಕರ್ಮ ಯೋಗಿ ಈ ರವಿಯು
ಪೃಥ್ವಿಯ ಮತ್ತೊಂದೆಡೆಗೆ ಕಾಯಕ ಮಾಡುವನು
ಬೆಳಕನು ಚೆಲ್ಲುತ ಸಕಲ ಜೀವಿಗಳಿಗೆ ಆಸರೆಯು
ಸೌರವ್ಯೂಹಕೆ ಬೆಳಕು ಚೆಲ್ಲುವನು
ನಿಸರ್ಗಕೆ ಪುಷ್ಠಿ ನೀಡುವನು ಈ ದಿನಕರನು
ಸಕಲ ಜೀವರಾಶಿಗೆ ಅವಶ್ಯವು ನೀನು
ಮೂಡಣದಿ ಆಗಮಿಸಿ ಪಡುವಣದಲಿ ವಿರಮಿಸುವನು
ಕಿರಣಗಳ ಪಸರಿಸುವನು ಸದಾಕಾಲವು
ಭುವಿಗೆ ಈ ಸೂರ್ಯನ ಸೇವೆ ನಿರಂತರವು
ನಿಸ್ವಾರ್ಥ ಸೇವೆಯಲಿ ತೊಡಗಿಹನು
🙏🏻ನಿನಗಿದೋ ಸರ್ವರ ನಮನಗಳು🙏🏻
- ಆಶಾ.ಎಲ್.ಎಸ್, ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ