ಭಾನುವಾರ, ಡಿಸೆಂಬರ್ 19, 2021

ಸೂರ್ಯಾಸ್ತ (ಕವಿತೆ) - ಆಶಾ.ಎಲ್.ಎಸ್, ಶಿವಮೊಗ್ಗ.

ಬಾನಂಗಳದಿ ನೋಡಲು ಮನಮೋಹಕವು
ನೈಸರ್ಗಿಕವಾದ ಸೂರ್ಯಾಸ್ತಮಾನವು
ಭೂಮಿಗೆ ಬೆಳಕ ಚೆಲ್ಲಿ ತನ್ನ ಕಾರ್ಯ ಮುಗಿಸಿ
ಹೊರಟಿಹ ಆ ಭಾಸ್ಕರನು 
ನಿತ್ಯ ಕರ್ಮ ಯೋಗಿ ಈ ರವಿಯು
ಪೃಥ್ವಿಯ ಮತ್ತೊಂದೆಡೆಗೆ ಕಾಯಕ ಮಾಡುವನು
ಬೆಳಕನು ಚೆಲ್ಲುತ ಸಕಲ ಜೀವಿಗಳಿಗೆ ಆಸರೆಯು
ಸೌರವ್ಯೂಹಕೆ ಬೆಳಕು ಚೆಲ್ಲುವನು
ನಿಸರ್ಗಕೆ ಪುಷ್ಠಿ ನೀಡುವನು ಈ ದಿನಕರನು
ಸಕಲ ಜೀವರಾಶಿಗೆ ಅವಶ್ಯವು ನೀನು
ಮೂಡಣದಿ ಆಗಮಿಸಿ ಪಡುವಣದಲಿ ವಿರಮಿಸುವನು
ಕಿರಣಗಳ ಪಸರಿಸುವನು ಸದಾಕಾಲವು
ಭುವಿಗೆ ಈ ಸೂರ್ಯನ ಸೇವೆ ನಿರಂತರವು
ನಿಸ್ವಾರ್ಥ ಸೇವೆಯಲಿ ತೊಡಗಿಹನು
🙏🏻ನಿನಗಿದೋ ಸರ್ವರ ನಮನಗಳು🙏🏻
- ಆಶಾ.ಎಲ್.ಎಸ್, ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...