ಭಾನುವಾರ, ಡಿಸೆಂಬರ್ 19, 2021

ಖಾಲಿ ಜೀವನ (ಕವಿತೆ) - ಮೊಹಮ್ಮದ್ ಅಜರುದ್ದೀನ್.

ಖಾಲಿ ಜೀವನ ನನ್ನ ಯೌವ್ವನ  
ಯಾರಿಗೆ ಹೇಳಲಿ ನನ್ನ ನೋವನ್ನ
ಸುಸ್ತಾಗಿ ಹೋಗಿದೆ ನನ್ನ ಜೀವನ  
ಈ ಪ್ರೀತಿ ಎಂಬ ಪಯಣ ||

ಮನಸ್ಸಿನ ಅವಳ ಮೌನ  
ಕೆಡಿಸುತ್ತಿದೆ ನನ್ನ ಜೀವನ
ಬರೆಯುವೆ ಪ್ರತಿದಿನ ಕವನ
ಇದೇ ನನ್ನ ಪ್ರೀತಿಯ ಯೌವ್ವನ ||

ಎಷ್ಟಂತ ನೆನೆಯಲಿ ನಿನ್ನ
ಕಣ್ಮೀರು ಬರುವ ಮುನ್ನ
ಬೇಗ ಹೇಳು ಪ್ರೀತಿಯ ಚಿನ್ನ  
ನಾ ನಿನ್ನ ಮರೆಯುವ ಮುನ್ನ ||  

 ಪ್ರೀತಿಗಾಗಿ ಹೂವಾ ಕೊಟ್ಟೆ  
ಹೂವಿನಲ್ಲಿ ನನ್ನ ಮನಸ್ಸು ಇಟ್ಟೆ
ಆ ಮನಸ್ಸು ನಿನಗಾಗಿ ಬಿಟ್ಟೆ  
ನಿನ್ನ ಹಿಂದೆ ಹೋಗಿ ನಾನು ಕೆಟ್ಟ ||  



- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...