ಖಾಲಿ ಜೀವನ ನನ್ನ ಯೌವ್ವನ
ಯಾರಿಗೆ ಹೇಳಲಿ ನನ್ನ ನೋವನ್ನ
ಸುಸ್ತಾಗಿ ಹೋಗಿದೆ ನನ್ನ ಜೀವನ
ಈ ಪ್ರೀತಿ ಎಂಬ ಪಯಣ ||
ಮನಸ್ಸಿನ ಅವಳ ಮೌನ
ಕೆಡಿಸುತ್ತಿದೆ ನನ್ನ ಜೀವನ
ಬರೆಯುವೆ ಪ್ರತಿದಿನ ಕವನ
ಇದೇ ನನ್ನ ಪ್ರೀತಿಯ ಯೌವ್ವನ ||
ಎಷ್ಟಂತ ನೆನೆಯಲಿ ನಿನ್ನ
ಕಣ್ಮೀರು ಬರುವ ಮುನ್ನ
ಬೇಗ ಹೇಳು ಪ್ರೀತಿಯ ಚಿನ್ನ
ನಾ ನಿನ್ನ ಮರೆಯುವ ಮುನ್ನ ||
ಪ್ರೀತಿಗಾಗಿ ಹೂವಾ ಕೊಟ್ಟೆ
ಹೂವಿನಲ್ಲಿ ನನ್ನ ಮನಸ್ಸು ಇಟ್ಟೆ
ಆ ಮನಸ್ಸು ನಿನಗಾಗಿ ಬಿಟ್ಟೆ
ನಿನ್ನ ಹಿಂದೆ ಹೋಗಿ ನಾನು ಕೆಟ್ಟ ||
- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ