ಭಾನುವಾರ, ಡಿಸೆಂಬರ್ 19, 2021

ಹರಕೆ ನಮ್ದು (ಕವಿತೆ) - ತುಳಸಿದಾಸ ಬಿ. ಎಸ್.

ಭೂಮಿ ತಾನು ಸುತ್ತಿದಂತೆ ಬೆಳಗೊ ಸೂರ್ಯನ
ಸ್ವಾಮಿ ಕೇಳು ಕುರಿಯ ಜೊತೆ ಸುತ್ತುತಿರುವೆವು
ತಮವ ಕಳೆದು ಬೆಳಕನೀವ ಸೂರ್ಯನಂತೆಯೇ
ನಮ್ಮ ಬಾಳು ಬೆಳಗೋ ಕುರಿ ನಮಗೆ ದೇವರು

ಬಯಲಿನಲ್ಲೇ ಕುರಿಯ ಜೊತೆ ನಮ್ಮ ನಿದ್ದೆಯು
ಎಲ್ಲಿ ರಾತ್ರಿ ಅಲ್ಲೆ ನಮ್ಮ ವಾಸು ಸ್ಥಾನವು
ಬೆಳಕೆ ಇರದು ರಾತ್ರಿ ಪೂರ್ತಿ ಹುಳದ ಕಾಟವು
ಬೇಡವಣ್ಣ ಇಂತ ಬದುಕು ನಿತ್ಯ ನರಕವು

ಊರು ಬೇರೆ ಯಾರ ಹೊಲ ಒಂದು ತಿಳಿಯದು
ಉಗಿತ ಹೊಡೆತ ತಿಂದು ಕುರಿಗೆ ಕಾವಲಿರುವೆವು
ಕುರಿಯ ಹಿಂಡಿನೊಡನೆ ಸಾಗಿ ಗಟ್ಟಿಗೊಂಡೆವು
ಹುಟ್ಟಿದೂರು ದೂರವಿರಲು ನೊಂದು ಕೊಂಡೆವು

ಊಟ ನೀರು ಅಷ್ಟಕ್ಕಷ್ಟೆ ಮಳೆಗೆ ನೆನೆದೆವು
ಗುಡುಗು ಸಿಡಿಲಿಗಂಜದೇನೆ ಗಂಜಿ ಕುಡಿದೆವು
ಕಾಲ ತುಂಬ ಗೊಬ್ಬೆ ಬಂದ ನೋವ ಸಹಿಸುತ
ಪ್ರೀತಿಯಿಂದ ಕುರಿಗೆ ರಕ್ಷೆ ನೀಡುತಿರುವೆವು

ಹಳ್ಳ ಈಜಿ ಬರದೆ ಕುರಿಯು ಮುಳುಗಿದಾಗಲೂ
ಸಿಡಿಲ ಬಿದ್ದು ಕಾಯ್ದ ಕುರಿಯು ಸತ್ತು ಬೀಳಲು
ಬಿದ್ದ ಪೆಟ್ಡಿನೇಟಿನಿಂದ ಏಳಲಾರೆವು
ಹರಕೆ ನಮ್ದು ಬೀರಪ್ಪ ಕುರಿಯನುಳಿಸೆಯ
    - ತುಳಸಿದಾಸ ಬಿ ಎಸ್ ಶಿಕ್ಷಕರು, ರಾಯಚೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...