ಭಾನುವಾರ, ಡಿಸೆಂಬರ್ 19, 2021

ಕನಸಲಿ ಬರಬೇಡ ಅವ್ವ ಬೈತಾಳೆ (ಕವಿತೆ) - ನಾಗೇಶ್ ಎಸ್.ಆರ್.ಸಿ.

ತಂಪಾದ ಗಾಳಿ ಬಿಸುತ್ತಿತ್ತು,ಆ ರಾತ್ರಿ ಸಂಜೆಯಲಿ
ನೀ ಸಿಕ್ಕೆ ಮುಸಂಜೆ ವೇಳೆಲಿ
ರಾತ್ರಿಯಿಡಿ ಕನಸಲಿ ಕನವರಿಕೇ ನಿನ್ನ ರೂಪರಾಶಿ
ಅವ್ವ ಕಾಫಿ ತರುವಾಗ ಕೇಳ್ಯಾಳು
ಕನಸಲಿ ಬರಬ್ಯಾಡ ಅವ್ವ ಬೈತಾಳೆ....

ನಗುವ ರೂಪಶಿ
ಕೋಗಿಲೆಯ ಕಂಠಸಿರಿ
ನವಿಲೆಯ ನಾಟ್ಯ ಮಯೂರಿ
ನೀ ನಿಲ್ಲದೆ ನಡೆಯಲ್ಲ ನನ್ನ ಜೀವನದ ದಾರಿ
ತುಸು ಬಾಗಿಲ ಬಳಿ ಇಣುಕಿ ಬರುತ್ತಿಯಾ ಅವ್ವ ಇರುತ್ತಾಳ
ಕನಸಲಿ ಬರಬ್ಯಾಡ ಅವ್ವ ಬೈತಾಳೆ...

ಸಿಕ್ಕಾಗೆಲ್ಲ ಸಿಹಿ ಮುತ್ತ ನೀಡುತಿ
ನನ್ನ ಕಂಡಾಗ ನಗುವಿನ ಹೊಳೆ ಸುರಿಸುತೀ
ಮನಸಿನ್ಯಾಗ ಸೇರಿ ಹೋಗತಿ
ಕನಸಿನ್ಯಾಗ ಬಂದ ಕಾಡತಿ
ಚಾಮುಂಡಿ ಬೆಟ್ಟದ ಎತ್ತರ
ನಿನ್ನ ಮುತ್ತಿನ ಸಿಹಿ
ಹತ್ತಿ ಬಂದೆ ಸಿಕ್ಕಿತ್ತು ಜೇನು ಸಿಹಿ
ದಿನರಾತ್ರಿ ಕನಸಲಿ ಬರತಿ
ಕನಸಲಿ ಬರಬ್ಯಾಡ ಅವ್ವ ಬೈತಾಳೆ.
- ನಾಗೇಶ್ ಎಸ್.ಆರ್.ಸಿ. ಚಂದಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...