ಶನಿವಾರ, ಡಿಸೆಂಬರ್ 18, 2021

ಪ್ರೀತಿ, ವಿಶ್ವಾಸ, ನಂಬಿಕೆ ನೈಜ ಬದುಕಿನ ಆಧಾರಗಳೇ ? (ಲೇಖನ) - ಪ್ರಕಾಶ ಕೊಪ್ಪದ (ಅಚ್ಚರಿಯ ಪಯಣಿಗ)

"ಅಳುತ್ತಾ ಈ ಜಗತ್ತಿಗೆ ಕಾಲಿಟ್ಟೆ ನೀನು ಹೋಗುವಾಗ ನಿನಗಾಗಿ ಈ ಜಗತ್ತು ಸ್ವಲ್ಪ ಕಣ್ಣೀರು ಹಾಕಲಿ"
                   ಸ್ವಾರ್ಥ ಕತೆಯ ಬದುಕನ್ನು ಬಿಟ್ಟು ನಿಸ್ವಾರ್ಥ ಸೇವೆಯ ಕಡೆಗೆ ನಮ್ಮೆಲ್ಲರ ಗಮನ ದಾಪುಗಾಲು ಹಾಕಲಿ. ಸಮಾಜದ ಮುಖ್ಯವಾಹಿನಿಗಳಲ್ಲಿ ಇರುವ ಮುಖಂಡರು, ಮುತ್ಸದ್ಧಿಗಳು, ನಾಯಕರು, ರಾಜಕೀಯ ಚಿಂತಕರು  ಇತರರಿಗಿಂತಲೂ ತೀರ ವಿಭಿನ್ನವಾದ ಮಾತುಗಳು ಹವ್ಯಾಸ ವರ್ತನೆ ನಮ್ಮನ್ನೆಲ್ಲ ಮೌನದಂತೆ ಇರಲು ಮಾಡಿದ ಮಜಲುಗಳು.

ಪ್ರೀತಿ ಎಂದರೆ ಎರಡು ಮನಸ್ಸುಗಳ ಮಧ್ಯೆ ಸೌಂದರ್ಯ ತವಾಗಿ ಕಾಮದಾಸೆಯ ತೃಪ್ತಿಗಾಗಿ ಹುಟ್ಟುವ ಎರಡಕ್ಷರ ಪದವಲ್ಲ ಅಗಾಧವಾಗಿ ಆಳಕ್ಕಿಳಿದು ಅದರ ಅರ್ಥವನ್ನು ವಿಶಾಲಾರ್ಥದಲ್ಲಿ ಓದಬೇಕು. ನಮ್ಮನ್ನೇ ನಾವು ಮತ್ತೊಬ್ಬರಿಗೆ ಹೋಲಿಸಿ ಅವರಂತೆ ನಾವಿಲ್ಲ ನಮ್ಮಂತೆಯೇ ಅವರಿಲ್ಲ ಎನ್ನುವುದು ನಮ್ಮ ತಪ್ಪನ್ನು ನಾವು ಮುಚ್ಚಿಕೊಳ್ಳಲು ಅನುಸರಿಸಿದ ಮಾರ್ಗವೇ. ಇದು ಸರಿಯಾದುದಲ್ಲ ಜೀವನದ ಮಾರ್ಮಿಕವಾದ ಘಟನೆಗಳನ್ನು ಅತ್ಯಂತ ಕ್ರಿಯಾಶೀಲತೆಯಿಂದ ಕೂಡಿದ ಸಮಾರಂಭಗಳನ್ನು ನಾವು ಕೇಳಿರಬಹುದು ಮತ್ತು ಕಂಡಿರಬಹುದು. ಅವುಗಳಲ್ಲಿ ಇರುವ ಪ್ರೀತಿ ಅಜರಾಮರ.

ತಾಯಿ ತನ್ನ ಮಗುವಿಗೆ ತೋರುವುದು ಮಮತೆ, ಪ್ರೀತಿ, ವಸ್ಥಲ್ಯ, ಕರುಣೆ, ಮತ್ತು ಅವಿನಾಭಾವ ಸಂಬಂಧವನ್ನು ಮಗು ತನ್ನಂತೆಯೇ ಪ್ರಪಂಚವನ್ನು ನೋಡಬಾರದು ಎಂದು ಪರಿಪರಿಯಾಗಿ ಜೀವನದ ಮಜಲುಗಳನ್ನು ಮಗುವಿಗೆ ಕಲಿಸುವುದು ತಾಯಿಯ ನಿಜವಾದ ಪ್ರೀತಿ ಮತ್ತು ಸಹಜ ಧರ್ಮವು ಕೂಡ. ನಾವೆಲ್ಲರೂ ಬಿಂಬಿಸಿ ದಂತೆ ಪ್ರೀತಿಯೆಂಬುದು ಒಂದು ಹುಡುಗ ಮತ್ತು ಹುಡುಗಿಯ ಮಧ್ಯೆ ಇರುವ ಸಂಬಂಧವೇ ಅಲ್ಲ.

"Beautiful and body attraction to the love not but beautiful heart and helping Nature true love"
ಎನುವ ಉಕ್ತಿಯನ್ನು ಉಳಿಸಬಹುದು.

ಪ್ರೀತಿ ಎಂಬುದು ಸರೋವರದ ತಳಭಾಗದಲ್ಲಿ ಅಡಗಿರುವ ಮುತ್ತವೂ ಹೌದು ನಾವು ತಿಳಿದುಕೊಂಡಂತೆ ಒಂದು ಹುಡುಗ ಮತ್ತು ಹುಡುಗಿಯ ಮಧ್ಯೆ ಅದು ಜನಿಸಲಾರದು. ನಾವು ಕಂಡಿದ್ದು ಪ್ರೀತಿಯಲ್ಲ ಸೌಂದರ್ಯವನ್ನು ಅರಗಿಸಿಕೊಳ್ಳಲಾರದ ಆಕರ್ಷಣೆಯ ಭಾವಬಿಂದು. ವಯಸ್ಸಿನ, ಸಮಾನಮನಸ್ಕರ, ಯೌವನದ ಕಾರು-ಬಾರು ಗಳು ಪ್ರೀತಿಯನ್ನು ಮಾರಿ ಬಿಟ್ಟಿವೆ.

ಪ್ರೀತಿಯು ಉಳಿಯುವುದು ಹೇಗೆಂದರೆ ವಿಶ್ವಾಸ ವಾಸ್ತವದ ನೆಲೆಗಟ್ಟಿಗೆ ತುಂಬಾ ದೂರವಾಗಿದೆ. 

"ವಿಶ್ವಾಸದ ಮೇಲೆ ವಿಶ್ವಾಸವನ್ನಿಟ್ಟು ಕಳೆದುಕೊಂಡಿದ್ದು ದುಪ್ಪಟ್ಟು ಎನ್ನುವ ಸ್ಥಿತಿಗೆ ನಮ್ಮಲ್ಲಿ ವಾಸ್ತವವಾಗಿ ಕಂಡುಬರುವುದು ಸಹಜ"

ವಿಶ್ವಾಸ ವೆಂಬುದು ಸಕಲ ರಲ್ಲಿರುವ ನಾವು ದೇವರಿಗೆ ನೀಡುವ ನೈವೇದ್ಯಕ್ಕೂ ಹೋಲಿಸಬಹುದು. ಒಬ್ಬರನ್ನೊಬ್ಬರನ್ನು ಜೋಡಿಸುವ ಕೊಂಡಿಯೂ ಹೌದು. ಒಬ್ಬ ವ್ಯಕ್ತಿ ಒಂದು ಕೆಲಸದಲ್ಲಿ ನಿರಂತರವಾಗಿ ಕಾರ್ಯತಪ್ತನಾದರೆ ಆ ವ್ಯಕ್ತಿಯು ಆ ಕೆಲಸದಲ್ಲಿ ಹೊಂದಿರುವ ಗಾಢವಾದ ವಿಶ್ವಾಸ ನಾನು ಮಾಡುತ್ತೇನೆ ಎಂಬ ಪ್ರತಿಜ್ಞೆ ಅವನನ್ನು ಆ ಕೆಲಸದಲ್ಲಿ ಸದಾ ನಿರಂತರವಾಗಿ ಇರುವಂತೆ ವಿಶ್ವಾಸವು ಅವನನ್ನು ಗಟ್ಟಿಗೊಳಿಸಿದೆ.

ನಾವು ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ ಆಗುವುದು ಸಹಜ ಅದು ಕೆಲವರು ನಮ್ಮ ನಂಬಿಕೆಯನ್ನು ಕಳೆದುಕೊಂಡಿರಬಹುದು. ನಾವು ಪ್ರೀತಿಯಲ್ಲಿ ಸೋತಿರಬಹುದು. ಇದೆಲ್ಲಕ್ಕೂ ಮಿಗಿಲಾಗಿ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಒಂದು ಮಾತನ್ನು ಹೆಚ್ಚಿಗೆ ಆಡಿ ಜಗಳ ಮಾಡಿಕೊಂಡಿರುವುದು ಉಂಟು. ಸಕಲರಿಗೂ ಒಪ್ಪುವುದು ಎಲ್ಲರಿಗೂ ಒಪ್ಪುವುದು ಆದರೆ ಅದು ಅವರ ಅನುಭವಕ್ಕೂ ಮತ್ತು ಅವಿನಾಭಾವ ಸಂಬಂಧಕ್ಕೆ ಮೊದಲು ಹತ್ತಿರವಾಗಿರಬೇಕು.

"ವಿಶ್ವಾಸ ಇರದಿದ್ದರೆ ವಿಸ್ಮಯಕಾರಿ ಜಗತ್ತಿನಲ್ಲಿ ಬದುಕುವವರು ಯಾರು ಬದುಕಿದವರೇ ದೇವಮಾನವರು"

ನಮ್ಮನ್ನು ನಾವೇ ನಾನು ಸೋತೆ ನನ್ನ ಕೈಯಲ್ಲಿ ಇದು ಆಗುವುದಿಲ್ಲ. ನನ್ನಲ್ಲಿ ಅಂಗವೈಕಲ್ಯತೆ ಇದೆ. ನನ್ನಲ್ಲಿ ಜ್ಞಾನಾತ್ಮಕ ವಿಕಾಸ ವಾಗುವುದಿಲ್ಲ. ಎಲ್ಲರಂತೆಯು ನನ್ನಲ್ಲಿ ಸೌಂದರ್ಯವೂ ಇಲ್ಲ. ನನ್ನ ಮಾತನ್ನು ಯಾರು ಕೇಳುವ ಇಚ್ಛಾಶಕ್ತಿಯನ್ನು ಹೊಂದಿಲ್ಲ.
ಇಂತಹ ಹತ್ತು ಹಲವಾರು ದುಗುಡ ಪ್ರಶ್ನೆಗಳು ನಮ್ಮನ್ನು ಕಾಡುವುದು. ಇಂತಹ ಮಾತುಗಳನ್ನು ಒಬ್ಬರಿಂದ ಮತ್ತೊಬ್ಬರ ಮುಂದೆ ಹೇಳುವ ಪರಿಯಲ್ಲಿ ಬದಲಾವಣೆ ಮಾಡದೆ ನಮ್ಮನ್ನೇ ನಾವು ಜುಗುಪ್ಸೆಯ ಜೀವನಕ್ಕೆ ಮಾರು ಹೋದಂತೆ ಸರಿ.

ನಮ್ಮನ್ನೇ ನಾವು ಬೆಳೆ ಬೆಳೆಯುವ ಹೊಲಕ್ಕೆ ಹೋಲಿಸಿಕೊಂಡು ನಮ್ಮಲ್ಲಿ ವಿಶ್ವಾಸ ಎಂಬ ಬೀಜವನ್ನು ಬಿತ್ತಿ ಆತ್ಮವಿಶ್ವಾಸವನ್ನೇ ರೆಂಬೆ-ಕೊಂಬೆ ಗಳನ್ನಾಗಿ ಮಾಡಿ ದೊಡ್ಡ ಆಲದ ಮರವಾಗಿ ನಾವು ಬೆಳೆದಾಗ ನಮ್ಮ ನೆರಳು ಬಯಸಿ ಬರುವವರು ಮತ್ತ್ಯಾರು ಅಲ್ಲ ಹಿಂದೆ ನಮ್ಮನ್ನು ಹಂಗಿಸಿ ನಕ್ಕವರೇ.

" ಮನುಕುಲಕ್ಕೆ ಒಪ್ಪುವುದು ವಿಶ್ವಾಸ ಅದಕ್ಕೆ ನೀನು ಒಪ್ಪದಿದ್ದರೆ ನಿನ್ನ ಜೀವನವೇ ಉಪವಾಸ "

ನಿನ್ನಲ್ಲಿ ಆತ್ಮವಿಶ್ವಾಸ ಒಂದಿದ್ದರೆ ಜೀವನದ ನಾನಾ ರಂಗಗಳಲ್ಲಿ ನಿನ್ನನ್ನು ನೀನು ಸದ್ಬಳಕೆಯ ರೀತಿಯಲ್ಲಿ ಬಳಸಿಕೊಂಡು ಸ್ವಲ್ಪ ತಕ್ಕಮಟ್ಟಿಗೆ ಜೀವನದಲ್ಲಿ ಉತ್ಸಾಹ ಕಥೆಯನ್ನು ಪಡೆಯುವುದು ಸ್ವಲ್ಪ ಮಟ್ಟಿಗೆ ನೀನು ಧೃತಿಗೆಡದೆ ಮುನ್ನುಗ್ಗಬೇಕು ಅಷ್ಟೇ.

"ಪ್ರೀತಿಯು ಚಿಗುರು ಒಡೆದಾಗ ವಿಶ್ವಾಸ ಬೇರುಗಳಲ್ಲಿ ಗುಪ್ತ ವಾಗಿರಬೇಕು ನಂಬಿಕೆ ಎಂಬುದು ರೆಂಬೆ ಕೊಂಬೆಗಳಲ್ಲಿ ಹಾರಾಡಬೇಕು."

ಅತಿಯಾದ ಆತ್ಮವಿಶ್ವಾಸವೂ ನಮ್ಮನ್ನು ಸೋಲಿನ ಕಡೆಗೆ ಕೊಂಡೊಯ್ಯುತ್ತದೆ ಎಂಬುದು ನೆನಪಿರಲಿ. ಅದು ಹೇಗೆಂದರೆ ನಾವು ಅನ್ಯ ಮಾರ್ಗದ ಹಾದಿಯನ್ನು ಹಿಡಿದು ನಮಗಿಷ್ಟವಿಲ್ಲ ಆದರೆ ಅದರಲ್ಲಿರುವ ಸ್ವಾರ್ಥತೆಯ ಬದುಕು ನಮ್ಮನ್ನು ಆತ್ಮವಿಶ್ವಾಸದ ಸೋಲಿಗೆ ಕಾರಣೀಭೂತವಾಗಬಹುದು. ಬದುಕಿನ ಸರ್ವೇಸಾಮಾನ್ಯ ಘಟನೆಗಳು ನಮ್ಮ ಮೇಲೆ ಅವು ಬೀರಿದ ಪರಿಣಾಮಗಳನ್ನು ನಾವು ಎಂದಿಗೂ ಮರೆಯಬಾರದು. ಅದು ಶಾಶ್ವತವಾಗಿ ಇರಬಹುದು ಅಥವಾ ಕಲ್ಪನೆಯ ಮುಂಭಾಗದಲ್ಲಿ ನಿಂತು ಸದಾ ನಮ್ಮ ಎದುರಿಗೆ ಬರಬಹುದು. ಅದನ್ನು ನಾವು ಕನಸಿಗೆ ಹೋಲಿಸಿ ಅದರಲ್ಲಿ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಇಡುವುದು ಮೂರ್ಖತನದ ಕಾರ್ಯವು ಹೌದು.

"ನಂಬುವದರ ಭಾವ ನಂಬಿಕೆ
 ನಿನಗೇಕೆ ಅವರ ಮೇಲೆ ಅವಲಂಬಿಕೆ
ಸನ್ಮಾರ್ಗದಲ್ಲಿ ನಡೆದು ಸದಾ ನೀನಾಗು ಎಲ್ಲರಿಗೂ ಸದ್ಬಳಕೆ"

ಜೀವಕ್ಕೆ ಮತ್ತು ಜೀವ ಮಾನಕ್ಕೂ ಬಹಳ ವ್ಯತ್ಯಾಸ ಹಾಗೆ ವಿಶ್ವಾಸ ಮತ್ತು ಆತ್ಮವಿಶ್ವಾಸಕ್ಕೂ ತೀರ ವಿಭಿನ್ನವಾದ ಅರ್ಥವುಂಟು. ನಾವು ನಮ್ಮ ಮೇಲೆ ನಂಬಿಕೆಯನ್ನಿಟ್ಟು ನೈಜ ಬದುಕಿನ ಆಡಂಬರ ಆಚರಣೆಗಳಿಗೆ ಮೊರೆ ಹೋಗದೆ. ಸ್ವಾರ್ಥದ ಬದುಕಿಗೆ ಬಲಿಪಶು ಯಾಗದೆ. ಇತರರಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ಬದುಕಿನ ನೆಲೆಗಟ್ಟನ್ನು ನಾವು ನಮ್ಮ ಚೌಕಟ್ಟಿನ ರೂಪರೇಷೆಗಳನ್ನು ಬೆಳೆಸಿಕೊಂಡು ಅದರಲ್ಲಿ ಕಾರ್ಯಮಗ್ನರಾಗಿ ನಮ್ಮಲ್ಲಿರುವ ಪ್ರೀತಿ ವಿಶ್ವಾಸ ಮತ್ತು ನಂಬಿಕೆಗಳನ್ನು ಬಳಸಿಕೊಳ್ಳಬೇಕು.

"ನಯವಂಚಕರ ಮೇಲೆ ನಂಬಿಕೆಯನ್ನಿಟ್ಟು ಕೀಚಕನ ಕೈಯಲ್ಲಿ ಆತ್ಮವಿಶ್ವಾಸವನ್ನು ಕೊಟ್ಟು ಮತ್ತು ಸೌಂದರ್ಯದ ಮೋಡಿಗೆ ಮರುಳಾಗಿ ಕಾಮದಾಸೆಗೆ ಪಟ್ಟು ಪ್ರೀತಿಯನ್ನು ಹರಿಬಿಟ್ಟರೆ ನಮ್ಮಂತ ಶತಮೂರ್ಖರು ಮತ್ತಾರು ಅಲ್ಲ.

ಪ್ರೀತಿ, ವಿಶ್ವಾಸ, ಮತ್ತು ನಂಬಿಕೆ ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವ ತ್ರಿ ಸೂತ್ರಗಳು ಎಂದರೆ ತಪ್ಪಾಗಲಾರದು.

"ಮಾಡಿದ ತಪ್ಪನ್ನು ಒಪ್ಪಿಕೊಂಡು ತಕ್ಕಮಟ್ಟಿಗೆ ಶಿಕ್ಷೆಯನ್ನು ಅನುಭವಿಸಿ ತಕ್ಕಡಿಯಲ್ಲಿಟ್ಟು ನಿನ್ನ ತೂಗಿದರೆ ನಿನ್ನ ಪಾಪ ಹೆಚ್ಚಾಗದಿರಲಿ" 

ನಮ್ಮ-ನಿಮ್ಮೆಲ್ಲರ ಈ ಬದುಕು ಶಾಶ್ವತನಾ? ತಮ್ಮ ತಮ್ಮಲ್ಲಿಯೇ ವೈಮನಸ್ಸನ್ನು ಹೊಂದಿರುವ ಎಷ್ಟು ಗುಣಾವಗುಣಗಳು ನಮ್ಮಲ್ಲಿ ಇವೆ. ಇಂದಿಗೂ ವಾಸ್ತವಿಕ ಬದುಕಿಗೆ ತೀರಾ ಸಮೀಪದಲ್ಲಿವೆ.

ನಮ್ಮ ಬದುಕನ್ನು ಹಸನಾಗಿಸುವ ವ್ಯಕ್ತಿಯನ್ನು ಪ್ರೀತಿಸಿ. ಅವರ ಆಸೆಗೂ ಮತ್ತು ನಿಮ್ಮ ಆಸೆಗೂ ಹೋಲುವ ರೀತಿಯಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಕಾರ್ಯಪ್ರವೃತ್ತರಾಗಿ ಅದರಲ್ಲಿ ನಾವು ಜಯಸುತ್ತೇವೆ ಎಂಬ ಬಲವಾದ ನಂಬಿಕೆ ಇರಲಿ.
    -  ಪ್ರಕಾಶ ಕೊಪ್ಪದ (ಅಚ್ಚರಿಯ ಪಯಣಿಗ).

(ಪ್ರಕಾಶ ಯಲ್ಲಪ್ಪ ಕೊಪ್ಪದ
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಸೇವೆ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...