ಶನಿವಾರ, ಡಿಸೆಂಬರ್ 11, 2021

ಕಿರುಗನವಗಳು - ಅನ್ಸೀ, ಬಾಳೆಹೊನ್ನೂರು.

ಬರವಸೆಯ ಬದುಕು
ದಿನಗಳು ಕಳೆಯುತಿದೆ, ಸಮಯ ವ್ಯರ್ಥವಾಗುತಿದೆ, ಜೀವನ ಹೇಗೆ ನಡೆಸಬೇಕೆಂಬುದೆ ಮನಸಿನ ಮೇಲೆ ಪರಿಣಮಿಸುತಿದೆ, ಆದರೂ, ತಕ್ಕಡಿಯಂತೆ ಸಮನಾಗಿ ಅಲ್ಲದಿದ್ದರೂ.., ತಕ್ಕಡಿ ಪಕ್ಕ ಇಡುವ ತೂಕದ ಗುಂಡಿನಂತೆ ಕಡಿಮೆ.., ಜಾಸ್ತಿ ಆಗುತ್ತಲೇ ನಡೆಯುತ್ತಿದೆ ಜೀವನ, ಆಗಲೇ ಬಂತೊಂದು ಬೆಳಕೆಂಬ ಕಾಂತಿ.., ಈ ಬೆಳಕೆಂಬ ಕಾಂತಿ ಜೀವನದ ದಿಕ್ಕು ಬದಲಿಸಿತಲ್ಲ ಎಂಬುದೆ ಆಶ್ಚರ್ಯ.., ಇಂದಿಗೂ ಅದೊಂದು ತಿರುವು ಈ ಜೀವನವೆಂಬ ಅಲೆ ನಿಂತ ನೀರಾಗದೆ ಹರಿವ ನೀರಾಗಿಹುದು ಸಂತೋಷದ ಸಂಗತಿ.., ಆದರೂ ಮನಸಲ್ಲಿರುವ ವಿಶ್ವಾಸಕೆ ಬದುಕುವೇ ನಾ ಭರವಸೆಗಾಗಿ..


ದೂರಾದ ಮನಸ್ಸು

ನಿನ್ನಿಂದ ದೂರ ಹೋಗುವ ಬಯಕೆ ಎನ್ನ ಹೃದಯಕೆ..,
ನೋವಿನಲ್ಲೂ ಮತ್ತೆ ಬದುಕಲಾರೆ ನಾ 
ಇನ್ನುಮುಂದೆ.,
ನೀ ಕೊಟ್ಟ ನೋವಿಗೆ ಸಹಿಸಲಾದೀತೆ ಈ ಮನಸ್ಸಿಗೆ..,
ನೋವಲ್ಲೂ ಸುಖ ಕಂಡ ಈ ಹೃದಯಕೆ..,
ದೂರಾಗಲೇ ಬೇಕಿದೆ ನಿನ್ನಿಂದ ಅದು ನನ್ನ ಅರಿಕೆ...

- ಅನ್ಸೀ , ಬಾಳೆಹೊನ್ನೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...