ಶನಿವಾರ, ಡಿಸೆಂಬರ್ 11, 2021

ಚುಟುಕುಗಳು - ಸ್ವಾತಿ ರಾವ್.

‌೧
ನೋವಿನ‌ ಜೊತೆಗೊಂದು ನಿರಾಸೆ
ಏನು ಆಗುತ್ತಿಲ್ಲವೆಂಬ ಹತಾಶೆ
ಪ್ರತಿ ದಿನವೂ ಒಂದೊಂದು ಪರೀಕ್ಷೆ
ಎಲ್ಲದರಲ್ಲೂ ‌ಸೋಲೆಂಬ ತಮಾಷೆ
ಆದರೂ ಸುಮ್ಮನಿರಲು ಬಿಡದು‌ ನಿರೀಕ್ಷೆ
ಮರಳಿ‌ ಯತ್ನವ ಮಾಡು ಇದೇ,
ಬದುಕಿಗೆ ನೀಡುವ ಪುಟ್ಟ ಭರವಸೆ


ಉದ್ವೇಗಕ್ಕೆ ಒಳಗಾದರೆ ಮನಸ್ಸು
ಉರಿದು ಹೋಗುವುದು ನಿನ್ನ ಕನಸು
ಊಹಾಪೋಹಗಳಿಗೆ ತೋರಬೇಡ‌ ಮುನಿಸು
ಮುಂದೆ ನಡೆ ಕಾಯುತಲಿದೆ ನಿನ್ನ ಯಶಸ್ಸು

ನಿನ್ನೆಯ ನೆನಪು
ನಾಳೆಯ ಕನಸು
ಇಂದಿನ ಬದುಕು 
ಎಲ್ಲದರಲ್ಲೂ ಜೀವಿಸು

ನಗು ಮೊಗದ ಶೋಭಿತೆ
ದಿಟ್ಟ ಹೆಜ್ಜೆಯ ವನಿತೆ 
ಅವಳಲ್ಲಿದೆ ಸಭ್ಯತೆ
ನಡತೆಯಲ್ಲಿದೆ ಪರಿಶುದ್ಧತೆ
ಹೆಣ್ಣೆಂದರೆ ಪರಿಪೂರ್ಣತೆ
ಅವಳಲ್ಲಿಲ್ಲ ಯಾವ ಕೊರತೆ
  ✍️ ಸ್ವಾತಿ ರಾವ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...