ಶನಿವಾರ, ಡಿಸೆಂಬರ್ 11, 2021

ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ (ಲೇಖನ) - - ಬಸವರಾಜ H ಹೊಗರನಾಳ.

ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಬಹಳ ಸಂಕಿರ್ಣವಾಗಿ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯಲ್ಲಿ, ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹಾತುಶಾಹಿ ಪ್ರಾಂತ್ಯಗಳಂತಿದೆ. ಭಾರತ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆಗೆ ಧಾರ್ಮಿಕ ಸ್ವತಂತ್ರ್ಯವನ್ನೂ ಒದಗಿಸಿದೆ. ವಾಕ್ಯಾಂಗದ ಉಪ ನಿಯಮಗಳು ಮಾತನಾಡುವ ಹಕ್ಕು ಸ್ವತಂತ್ರ್ಯತೆಯನ್ನು ಒದಗಿಸಿದೆ,ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆಯಾಗಿದ್ದು, ದೇಶದ ಒಳಗೆ ಮತ್ತು ಹೊರಗೆ ಎಲ್ಲಾ ಚಲನೆಯ ಸ್ವತಂತ್ರ್ಯವನ್ನೂ ಸಹ ನಮಗೆ ನೀಡಲಾಗಿದೆ. ಮತ್ತೆ ಮತ್ತೆ ಒತ್ತಿ ಒತ್ತಿ ಹೇಳುವಂತೆ ಅದರಲ್ಲಿಯೂ ಭಾರತೀಯ ಮಾನವ ಹಕ್ಕುಗಳ ತಂಡವು ಮತ್ತು ಕ್ರಿಯಾಶೀಲರು ಹೇಳುವಂತೆ, ಹಲವಾರು ಬಡತನದಲ್ಲಿ ಬೆಂದು ಹೋದ ವ್ಯಕ್ತಿಗಳು ಅಥವಾ ಕೆಳವರ್ಗದಲ್ಲಿ ಹುಟ್ಟಿರುವ ಬಡವರು ಬಹಳ ಕಷ್ಟ ಅನುಭುವಿಸಿದ್ದು ಈಗಲೂ ಸಹ ಕೆಲವರು ಅದನ್ನೇ ಅನುಭವಿಸುತ್ತಿದ್ದಾರೆ, ಗಣನಿಯ ತಾರತಮ್ಯದ ವಿವೇಚನೆಯಿಂದ ಇನ್ನೂ ತೋಳಲಾಡುತ್ತಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ವಿಶ್ವದ ಕೆಲ ದೇಶಗಳಲ್ಲಿ ಮಾನವ ಹಕ್ಕುಗಳ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ದೇಶವು ಸಾಮಾನ್ಯವಾಗಿ ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಗಮನವಿಟ್ಟುಕೊಂಡು ಕುಳಿತುಕೊಳ್ಳುವಂತಿಲ್ಲ, ಬೇರೆ ದೇಶದಲ್ಲಿರುವಂತೆ ಏಷ್ಯದ ಬಹುತೇಕ ದೇಶಗಳಲ್ಲಿ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು, ವಿಶ್ವವು 2009 ರಲ್ಲಿ ಸ್ವತಂತ್ರ್ಯಕ್ಕೆ 3 ನೇ ಸ್ಥಾನವನ್ನು ಕೊಟ್ಟಿರುವುದು ನಮ್ಮ ನಿಮ್ಮೆಲ್ಲರಿಗೆ ಸ್ವಾತಂತ್ರ್ಯತೆಯಲ್ಲಿ ಅತ್ಯಂತ ಉನ್ನತ ಮಟ್ಟದ ಸ್ಥಾನವನ್ನು ಕೊಟ್ಟಿರುವುದು ಸಂತೋಷದಾಯಕ ವಿಷಯವಾಗಿದೆ. ಇದರಲ್ಲಿ ಧಾರ್ಮಿಕ ಗುಂಪುಗಳ ನಡುವಿನ ಕೋಮು ಗಲಭೆ ಬ್ರಿಟಿಷರ ಆಡಳಿತ ಕಾಲದಿಂದಲೂ ಸ್ವಾತ್ಯಂತ್ರ್ಯದ ದಿನದವರೆಗೂ ನೆಡೆಯುತ್ತಲೇ ಬಂದಿವೆ.

ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಬಹಳ ವಿಪರೀತವಾಗಿ ರಚನೆಯಾಗಿರುವುದನ್ನು ನಾವು ಸಹಜವಾಗಿ ಕಂಡಿರುವುದು ಬಹಳ ಪ್ರಮುಖವಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂಭಾಗ ಮತ್ತು ಈ ದೇಶದಲ್ಲಿ ಸಾರ್ವಭೌಮತ್ವ, ಸಾಮಾಜಿಕವಾಗಿ ಸಮಾನತೆ, ಪ್ರಜಾತಂತ್ರ, ಗಣರಾಜ್ಯ ರಾಷ್ಟ್ರವಾಗಿದೆ..ಹಾಗೆಯೇ ಮಾನವನಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ಕೆಲಸವನ್ನು ಗಳಿಸುವ ಸಾರ್ವಜನಿಕ ಹಕ್ಕು ಹಾಗೂ ಮಾನವನ ಹಕ್ಕುಗಳ ದೌರ್ಬಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಪೊಲೀಸ್ ಸುಧಾರಣೆ ಕಾಯಿದೆಯನ್ನು ಜಾರಿಗೆ ತರಲಾಯಿತು, "ಇಂಡಿಯನ್ ಪೆನಾಲ್ ಕೋಡ್ ಸೆಕ್ಷನ್ 377 ರ ಅನ್ವಯ ಸ್ಪಷ್ಟವಿಲ್ಲದ "ಅಸ್ವಾಭಾವಿಕ ಲಿಂಗ ಕಾಯ್ದೆ ಸಲಿಂಗಕಾಮಗಳಿಗೆ ಅಸಂವಿಧಾನಾತ್ಮಕವಾಗಿದ್ದು, ಖಾಸಗಿಯಾಗಿ ಇಬ್ಬರು ನಡುವಿನ ಒಪ್ಪಂದಕ್ಕೆ ತಡೆಯಾಗಿದ್ದು ಅಪರಾಧಿ ಭಾವದಿಂದ ನೋಡದಿರಲು ತಂದ ಕಾಯ್ದೆ ಅದರಲ್ಲಿ ಮಾನವನಿಗಾಗಿಯೇ ಜಾರಿಗೆ ತಂದಂತಹ ಕಾಯಿದೆಗಳು ಈ ಕೆಳಗಿನಂತಿವೆ, ಮೂಲಭೂತ ಹಕ್ಕುಗಳು, ವಿವರಣೆಗಳು, ಸಂಪಾದಿಸಿದ ಭಾರತೀಯ ಸಂವಿಧಾನದಿಂದ ಮಾನ್ಯತೆ ಪಡೆದ ಆರು ಮೂಲಭೂತ ಹಕ್ಕುಗಳನ್ನು ಈ ಕೆಳಗೆ ನೀಡಲಾಗಿದೆ
*ಸಮಾನತೆಯ ಹಕ್ಕು
*ಸ್ವತಂತ್ರ್ಯದ ಹಕ್ಕು
*ಶೋಷಣೆಯ ವಿರುದ್ಧದ ಹಕ್ಕು
*ಧರ್ಮದ ಸ್ವತಂತ್ರ್ಯದ ಹಕ್ಕು
*ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
*ಸಾಂವಿದಾನಿಕ ಪರಿಹಾರದ ಹಕ್ಕು
ಭಾರತ ಸಂವಿಧಾನದ ರಚನೆಯಿಂದ ಪ್ರಜಾಪ್ರಭುತ್ವದ ಸಾರ್ವಭೌಮತ್ವದ ಗಣರಾಜ್ಯವಾಗಿ ಶ್ರೀಸಾಮಾನ್ಯರಿಗೆ ಮತದಾನ ಮಾಡುವ ಹಕ್ಕು ಸಂವಿಧಾನದ 3ನೇ ಭಾಗದಲ್ಲಿ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿದ್ದು, ಭಾರತದ ಉಚ್ಚ ಮತ್ತು ಶ್ರೇಷ್ಠ ನ್ಯಾಯಾಲಯಗಳು ಅಂಗಿಕಾರ, ಹಿಂದುಳಿದ ಜಾತಿ ಹಾಗೂ ವರ್ಗದ ಜನರಿಗೆ ವಿದ್ಯಾಭ್ಯಾಸ, ಉದ್ಯೋಗ ಮತ್ತು ರಾಜಕೀಯವಾಗಿ ಪ್ರತಿನಿಧಿಸುವಿಕೆಯ ಹಕ್ಕುಗಳ ಪ್ರಧಾನ.
1952 ರಲ್ಲಿ ಬುಡಕಟ್ಟು ಅಪರಾಧಿ ಜನಾಂಗವನ್ನು ವಿಭಾಗಿಸಿ ಮತ್ತು ಅವರನ್ನು ವಿರೋದಿಸಿ ಪ್ರಕಟಿಸಿ ಹ್ಯಯಬಿಚುಯೇಲ್ ಅಫೇನ್ಡರ್ಸ್ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರೀಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ ಇಂದಿನ ಯುವ ಪೀಳಿಗೆ ಹಾಗೂ ಯುವಕರಿಗೆ ಮಾನವ ಹಕ್ಕುಗಳ ಉಳುವಿಗಾಗಿ ಹಾಗೂ ಮಾನವನ ಅಭಿವೃದ್ಧಿಗೆ ಬೇಕಾಗಿರುವ ಮೂಲಭೂತ ಹಕ್ಕುಗಳ ಕುರಿತು ಜಾಗೃತರನ್ನಾಗೀಸಬೇಕಿದೆ‌.

ಮಾನವ ಹಕ್ಕುಗಳು ಎಂದರೆ ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವತಂತ್ರ್ಯಗಳನ್ನು ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ. ನಿರ್ಭೀತಿಯಿಂದ ಇರುವುದು, ಕಸಿದುಕೊಳ್ಳುವುದರಿಂದ ಮುಕ್ತಿ ಪಡೆಯುವುದು ಹಾಗೂ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಪಡೆಯುವುದು ನಮ್ಮ ನಿಮ್ಮೆಲ್ಲರ ಮೂಲಭೂತ ಅಕಾಂಕ್ಷೆಯಾಗಿದೆ. ಆದಕಾರಣದಿಂದಲೇ ಮಾನವ ಹಕ್ಕುಗಳನ್ನು ಕೆಲವೊಮ್ಮೆ 'ಸಹಜವಾದ ಹಕ್ಕುಗಳು 'ಎಂದು ಕರೆಯಲಾಗುತ್ತದೆ. ಎಲ್ಲಾ ಅಂತಾರಾಷ್ಟ್ರೀಯ ಸಮುದಾಯವು, ಭಾರತವೂ ಸೇರಿದಂತೆ, ಈ ಹಕ್ಕುಗಳನ್ನು ಹಾಗೂ ಹಕ್ಕುಗಳ ಅರ್ಥವೇನು ಎಂಬುದನ್ನು ಒಪ್ಪಿಕೊಂಡಿವೆ. ಸಂವಿಧಾನವನ್ನು ಬರೆದಾಗ, ಮಾನವ ಹಕ್ಕುಗಳನ್ನು ಮೂಲಭೂತ ಹಕ್ಕುಗಳು ಮತ್ತು ರಾಜ್ಯನೀತಿಯ ನಿರ್ದೇಶನ ತತ್ವವಿರುವ ಭಾಗ 3 & ಭಾಗ 4ರಲ್ಲಿ ಸೇರಿಸಲಾಗಿತ್ತು. ಅವುಗಳೆಲ್ಲವೂ ಸೇರಿ 'ಸಂವಿಧಾನ ಪ್ರಜ್ಞೆ 'ಎಂದು ರೂಪಗೊಂಡಿದೆ. ನ್ಯಾಯಸಮ್ಮತವಾದ ಸಾಮಾಜಿಕ ವ್ಯವಸ್ಥೆಯನ್ನು ಎಲ್ಲರಿಗೂ ದೊರಕಿಸಿಕೊಡುವ ಸಲುವಾಗಿ ನಾಗರೀಕ ಹಾಗೂ ರಾಜಕೀಯ ಸ್ವತಂತ್ರ್ಯಗಳನ್ನು ಒಟ್ಟಿಗೆ ಸೇರಿಸಬೇಕೆಂದು ಸಂವಿಧಾನದ ಅನುಯಾಯಿಗಳು ಭಾವಿಸಿದರು. ನಿರ್ದೇಶಕ ತತ್ವಗಳ ಉದ್ದೇಶ ಎಲ್ಲಾ ನೀತಿಗಳು ಮತ್ತು ಕಾನೂನು ರಚನೆಗಳಿಗೆ ಮಾರ್ಗದರ್ಶನ ನೀಡುವುದಾಗಿದೆ', ಬದಲಾವಣೆಯ ದಿಕ್ಸೂಚಿಯಾಗಬಹುದು', ಮತ್ತು ಕಾನೂನು ರಚನೆಗಳಿಗೆ ಮಾರ್ಗದರ್ಶನ ನೀಡುವುದಾಗಿದೆ. ಇದರಿಂದ ನಾವು ನೀವೆಲ್ಲರೂ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡು ಹಾಗೂ ಅವುಗಳ ಬಗ್ಗೆ ಇನ್ನೊಬ್ಬರಿಗೆ ತಿಳಿಯಪಡಿಸಿಕೊಳ್ಳುವುದನ್ನು ಕಲಿಯಬೇಕೆಂದು ಕೇಳಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಕರ್ತವ್ಯ ಆಗಿದೆ. ಹಾಗೂ ಮನುಕುಲದವರೆಲ್ಲರೂ ವಿಶ್ವಮಾನವನ ಹಕ್ಕುಗಳಿಗೆ ಮತ್ತು ಕರ್ತವ್ಯಗಳಿಗೆ ಮಹತ್ವವನ್ನು ಕೊಡಬೇಕಾಗಿದೆ..!
- ಬಸವರಾಜ H ಹೊಗರನಾಳ✍
ಪತ್ರಿಕೋದ್ಯಮ ವಿದ್ಯಾರ್ಥಿ,ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...