ಭಾನುವಾರ, ಡಿಸೆಂಬರ್ 19, 2021

ತರಹೇವಾರಿ ತರಕಾರಿ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

 ಕೊಳ್ಳ ಬನ್ನಿರಿ ತರಹೇವಾರಿ ತರಕಾರಿ ˌˌˌ
ಸದೃಢ ಬದುಕಿಗೆ ಇದುವೇ ರಹದಾರಿˌˌˌ
🥥🌶️

 ಬೆಂಡೆ ಬದನೆ ಹಾಗಲ ಹಸಿಮೆಣಸು ˌˌˌ
ತರತರ ರುಚಿಯು ಸವಿಯಲೇ ಸೊಗಸು ˌˌˌ
🥕🥕

ಕೋಸು ಆಲೂ ಟೊಮೇಟೊ ತಿನ್ನಿರಿ ಗಜ್ಜರಿˌˌˌ
 ತಾಜಾ ತರಕಾರಿ ವೈಶಿಷ್ಟತೆಗಳ ಸಾರೋಣ ಬನ್ನಿರಿˌˌˌ
🥦🍆

 ಆರೋಗ್ಯದೊಂದಿಗೆ ಆಯುಷ್ಯವೂ ಹೆಚ್ಚಲಿ ˌˌˌ
ಇದರ ಉಪಯೋಗ ಮಕ್ಕಳೂ ಅರಿಯಲಿ ˌˌˌ
🥒🫑

ಪೌಷ್ಟಿಕಾಂಶಗಳ ಕಣಜವೇ ಇವುಗಳುˌˌˌ
 ಬಳಸಿದರೆ ನಿತ್ಯ ಆರೋಗ್ಯಯುತ ಬಾಳುˌˌˌ
🍆🥬
 ಋತುಮಾನಕ್ಕೆ ತಕ್ಕ ವಿಧವಿಧ ಕಾಯಿಪಲ್ಲೆ ˌˌˌ
ಮೂಳೆ ಹಲ್ಲುಗಳ ಗಟ್ಟಿಗೆ ಸಾರವಿದುದಿಲ್ಲೆˌˌ
🥕🍅
 ಬನ್ನಿರಿ ಬಳಸೋಣ ಹರುಷದಿ ತರಕಾರಿ ˌˌˌ
ಆರೋಗ್ಯದ ಬಾಳಿಗೆ ಇದುವೇ ಸಹಕಾರಿ ˌˌ
🧄🧅
ಅರಿಯಬೇಕಿದೆ ಎಲ್ಲರೂ ಸಾವಯವ ಕೃಷಿಯˌˌ
 ಕಾಣ ಬೇಕಿದೆ ಬೆಳೆಗಾರರ ಮೊಗದಲಿ ಖುಷಿಯˌˌ
🍠🥐🌽🥕
 - ಮಧುಮಾಲತಿ ರುದ್ರೇಶ್ ಬೇಲೂರು.
🍏🍎🍌🍊🍇🍓


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...