ಮಂಗಳವಾರ, ಡಿಸೆಂಬರ್ 14, 2021

ಗಜಲ್ - ಮಾಜಾನ್ ಮಸ್ಕಿ.

ನೆನಪುಗಳ ಹೆಜ್ಜೆ ಗುರುತು ಅಳಿಸಿ ಹೋಗಿದೆ 
ಸಿಹಿ ಕನಸುಗಳ ರಾತ್ರಿ ಮಾಸಿ ಹೋಗಿದೆ 

ಎಷ್ಟೋ ವಸಂತಗಳು ಕಳೆದಿವೆ ನೀನಿಲ್ಲದೆ 
ಗಾಯ ಮಾದು ಕಲೆ ಉಳಿಸಿ ಹೋಗಿದೆ 

ಸಂಸಾರ ಯುದ್ಧದಲ್ಲಿ ಇರಿದ ಖಂಜರುಗಳು 
ಸಾವು ಉಸಿರಾಡಿ ಬದುಕಿಸಿ ಹೋಗಿದೆ 

ನಿನ್ನ ಹೆಸರ ಉಸಿರ ಬಸಿರಲಿ ನಿಂತಿದೆ 
ನೋವಿನಲಿ ಹೃದಯ ದಹಿಸಿ ಹೋಗಿದೆ 

ರಕುತದ ಮುಸಲ ಧಾರೆ ಹರಿದಿದೆ *ಮಾಜಾ*
ಒಂಟಿತನ ಸಾಕು ಏಕಾಂತ ಬಯಸಿ ಹೋಗಿದೆ 

- ಮಾಜಾನ್ ಮಸ್ಕಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...