ಶುಕ್ರವಾರ, ಫೆಬ್ರವರಿ 11, 2022

ಕೊರೋನ ಸಹೋದರಾ (ಕವಿತೆ) - ಶ್ರೀಮತಿ ಕಲಾವತಿ ಮಧುಸೂದನ.

ಸೌಹಾರ್ದತೆ ಸೌಜನ್ಯದ ಸಮಾನತೆಯ ಕೊರೋನಾ ಸಹೋದರ ಜ್ವರಾ.. ಎಲ್ಲೆಡೆಯು ಸಂಚರಿಸಿ ಮನೆಮನ ಗಳನು ಬಿಡದೆ ಹೊಕ್ಕು,ಮಕ್ಕಳು ಮುದುಕರು ಹರೆಯದವರೆಂದು ಬೇಧವೆಣಿಸದೆ ವಿಚಾರಿಸುವ ಜ್ವರಾ..

ಮಮತೆ ಕಾಳಜಿಗಳಿಂದ ನಿಷ್ಪಕ್ಷಪಾತದೆ ಸರದಿಯಂತೆ ವಿಚಾರಿಸುವ ವಿಶ್ವಾಸ ಪೂರ್ಣತೆಗೆ  ಮನೆಮಾತಾಗಿರುವ ಜ್ವರಾ.. ಕೊರೋನ ಸಹೋದರ ಜ್ವರಾ.. 

ಗೋಪಿಕಾ ಸ್ತ್ರೀಯರು ಒಂದೆಡೆ ಸೇರಿದಾಗ ರಾತ್ರಿ ನಮ್ಮ ಮನೆಗೆ ಕೃಷ್ಣ ಬಂದಿದ್ದ,ನಮ್ಮ ಮನೆಗೆ ಕೃಷ್ಣ ಬಂದಿದ್ದ
ಎಂದು ಎಲ್ಲರೂ ಒಂದೇ ಸಂಭ್ರಮವನ್ನು ಹೆಮ್ಮೆಯಿಂದ ಹಂಚಿಕೊಂಡಂತೆ...

ನಮ್ಮ ಮನೆಗೂ ಶೀತಛಳಿ ಜ್ವರಾ ಕೆಮ್ಮುಗಳ ಅತಿಥಿ ಮಿತ್ರರು ಬಂದು ವಿಚಾರಿಸುತ್ತಿದ್ದಾರೆ., ನಮ್ಮ ಮನೆಗೂ ಛಳಿಜ್ವರಗಳಿಂದ  ನರಳುವ ಧ್ವನಿಗಳದೇ ಸುಸ್ವರಾ...!!

ಉಪದ್ರವಿದ್ದರೂ. ಅಭದ್ರವಲ್ಲದ ಸಹಜರೂಪ ಪ್ರಾಣಾಂತಿಕವಿರದ ಶಾಂತರೂಪಿ  ವೈರಾಣುವ ಬೇಸರಿಸದೇ ಸತ್ಕರಿಸಿ ಉಪಚರಿಸಿ ಕಳಿಸೋಣ ಕೊರೋನ ಸಹೋದರನಾ..!!

ಆತಂಕರಹಿತ ಪಯಣವನು ನಿಭಾಯಿಸುವ ಕೊರೋನ ಸಹೋದರಿಯನು ಕೊರೋನಾದ ನಿಯಮವನೆ ಅನುಸರಿಸಿ  ಉಪಚರಿಸಲು ಮರೆಯದಿರೋಣ...!!

- ಶ್ರೀಮತಿ ಕಲಾವತಿ ಮಧುಸೂದನ, ಹಾಸನ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...