ಹರಿಯುವ ಕಣ್ಣಿನ ಕಂಬನಿಗೆ ಕಾರಣವ್ಯಾರು।
ಮನಸ್ಸಿನ ಭಾವನೆಗೆ ಒಡೆಯ ಇನ್ಯಾರೋ ॥
ಮರೆಯದೆ ಕಾಡುತ್ತಿವೆ ಮನಸ್ಸಿನ ನೋವುಗಳು ನೂರಾರು/
ನೋಡದೆ ಇರಲಾರದೆ ಇರಲು ಜೀವನ ಅಷ್ಟು ಸುಲಭವೇನೂ ?
ಈ ಆಸೆಗಳು ಹುಚ್ಚು ಎಂದು ತಿಳಿದರೂ
ಮಾಡುತ್ತಿವೆ ಸಾವಿರ ತಕರಾರು:
ಆಗುವ ಸಮಯವಲ್ಲ ಹೋಗುವ ಗಳಿಕೆಯೂ ಅಲ್ಲ
ಆದರೂ ಸದ್ದಿಲ್ಲದೆ ಮೂಡುತ್ತವೆ ತುಂಟಾಟದ ಕನಸುಗಳೆಲ್ಲಾ /
ಮರೆ ಮಾಚಿ ನಿಂತಿವೆ ನೂರಾರು ಆಸೆಗಳು
ಕಣ್ಮುಂದೆ ನಿಲ್ಲಲಾರದೆ
ಕಡಿವಾಣವೂ ಹಾಕಲಾರದೆ "
ಮರುಗುತ್ತಿದೆ ಮನಸ್ಸು ಒಳಗೊಳಗೆ/
- ಶ್ರುತಿ ಚಂದ್ರು. ಎಸ್ , ಕೊಟ್ಟೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಚೆನ್ನಾಗಿದೆ, ಹೀಗೆ ಸಾಗಲಿ ಬರವಣಿಗೆ
ಪ್ರತ್ಯುತ್ತರಅಳಿಸಿ