ಶುಕ್ರವಾರ, ಫೆಬ್ರವರಿ 11, 2022

ಹರಿಯುವ ಕಂಬನಿ (ಕವಿತೆ) - ಶ್ರುತಿ ಚಂದ್ರು, ಎಸ್.

ಹರಿಯುವ ಕಣ್ಣಿನ ಕಂಬನಿಗೆ ಕಾರಣವ್ಯಾರು।
ಮನಸ್ಸಿನ ಭಾವನೆಗೆ ಒಡೆಯ ಇನ್ಯಾರೋ ॥
ಮರೆಯದೆ ಕಾಡುತ್ತಿವೆ ಮನಸ್ಸಿನ ನೋವುಗಳು ನೂರಾರು/

 ನೋಡದೆ ಇರಲಾರದೆ ಇರಲು ಜೀವನ ಅಷ್ಟು ಸುಲಭವೇನೂ ?
ಈ ಆಸೆಗಳು ಹುಚ್ಚು  ಎಂದು ತಿಳಿದರೂ
 ಮಾಡುತ್ತಿವೆ ಸಾವಿರ ತಕರಾರು:
ಆಗುವ  ಸಮಯವಲ್ಲ ಹೋಗುವ ಗಳಿಕೆಯೂ ಅಲ್ಲ 
ಆದರೂ ಸದ್ದಿಲ್ಲದೆ ಮೂಡುತ್ತವೆ ತುಂಟಾಟದ ಕನಸುಗಳೆಲ್ಲಾ /

ಮರೆ ಮಾಚಿ ನಿಂತಿವೆ ನೂರಾರು ಆಸೆಗಳು
ಕಣ್ಮುಂದೆ ನಿಲ್ಲಲಾರದೆ 
ಕಡಿವಾಣವೂ ಹಾಕಲಾರದೆ "
ಮರುಗುತ್ತಿದೆ ಮನಸ್ಸು ಒಳಗೊಳಗೆ/

- ಶ್ರುತಿ  ಚಂದ್ರು. ಎಸ್ , ಕೊಟ್ಟೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...