ಶುಕ್ರವಾರ, ಫೆಬ್ರವರಿ 11, 2022

ಅರಳುವ ಸುಮ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಸುಮವ  ಮಾರಿ ಕುಸುಮವ ಅರಳಿಸುವ ಮಾತೆಯೇ
ಛಲದಿ ಬದುಕ ಕಟ್ಟಿಕೊಡಲು ಹವಣಿಸುತಿಯೇ
ಬೆನ್ನಿಂದಿರುವಳು ಪುಷ್ಪದ ರಾಣಿ ಅರಳುವಳು
ಅರಳಿ ಆಸರೆಯಾಗುವಳು ತಾಳ್ಮೆಯಲಿ ಕಾಯೇ.

ನಿನ್ನ ಹೆಗಲಲಿ ಹೊರುವ ಕಾಯಕಕೆ ನಿಂತಿಹಳು
ಹಣೆಬರಹವ ತಾನೇ ಬರೆಯಲು ಹೊರಟಿಹಳು
ಕಾಲಚಕ್ರದಲಿ ಯಾವುದು ಶಾಶ್ವತವಲ್ಲೆಂದು
ತಿಳಿದು ಇತಿಹಾಸ ಬರೆಯಲು ಸಜ್ಜಾಗಿಹಳು.

ನೀ ಮಾರಿದ ಹೂಗಳದು ಬಾಡಿದರು ಬಾಡಲಿ
ಜೀವಕೆ ಕಂಪ ಕೊಡುವ ಸುಮವದು ಬಾಡದಿರಲಿ
ಕೆಸರಲ್ಲಿ ಕಮಲ ಹುಟ್ಟಿದರು ಬೆಲೆಯು ಎಂದೆಂದೂ
ಕಷ್ಷಗಳೆಷ್ಟಿದರೂ ಬಾಡಿಸದಿರು ತಾಯಿ ಅವಳ ನಗುವೆಂದು.

ನಿಷ್ಕಲ್ಮಶ ತುಂಬಿದ ಕೈಯಲಿ ಪುಸ್ತಕವ ಹಿಡಿಸಿರುವೆ
ಸದ್ಗುಣ ಧಾರೆಯೆರೆದು ಮಸ್ತಕವ ಬೆಳೆಸಿರುವೆ
ಕಲ್ಲುಮುಳ್ಳು ತುಳಿದ ನಿನ್ನ ಪಾದಗಳ ಅಡಿಯಲ್ಲಿ
ಸುಮರಾಶಿಯ ಚೆಲ್ಲಿ ಬೆಳಗುವಳು ಕಾದು ನೋಡಲ್ಲಿ.

ಇದು ಕೇವಲ ನಿನ್ನಂತರಂಗದ ನೋವಲ್ಲ ಕೇಳೆ ಮಾತೆ
ಬೇಸರವಿಲ್ಲದೆ ಸಲಹುತಿಹಳು ಹಲವು ವ್ಯಥೆಯ ಭೂಮಾತೆ
ನಿನ್ನ ಭರವಸೆಯದು ನಿನ್ನ ಬೆನ್ನ ನೆರಳಾಗಿ ಕುಳಿತಿಹುದು
ನಿನ್ನ ಬೆಳಕಲಿ ಸಾಗಿಸುವ ಗುರಿಯನು ಹೊಂದಿಹುದು.

ಬಾಡುವ ಸುಮಕೆ ನೀರ ಚಿಮುಕಿಸುವಂತೆ ನೀಡು 
ಮಗಳ ಭವಿಷ್ಯವ ಬೆಳಗುವ ಭರವಸೆಯನು ಮನಕೆ.

- ಪುರುಷೋತ್ತಮ ಪೆಮ್ನಳ್ಳಿ.
ಪಾವಗಡ ತಾ ತುಮಕೂರು ಜಿ.
ದೂ.9632296809


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...