ಶುಕ್ರವಾರ, ಫೆಬ್ರವರಿ 11, 2022

ಗಜಲ್ - ಮಾಜಾನ್ ಮಸ್ಕಿ.

ನಬಿಸಾಹೇಬ್ ಅಮೀನಾಬಿ ದಂಪತಿಗಳ ಪುತ್ರನಾಗಿ ಜನಿಸಿದರು ಇಬ್ರಾಹಿಂ ಸುತಾರ 
ಆಧುನಿಕ ಸೂಫಿಸಂತರು ಕನ್ನಡದ ಕಬೀರ್ ನಂತೆ ಬೆಳಗಿದರು ಇಬ್ರಾಹಿಂ ಸುತಾರ

ಖುರಾನ್ ಹದೀಸ್ ಭಗವತ್ಗೀತೆ ಉಪನಿಷತ್ ವಚನಗಳ ಆಳ ಅಧ್ಯಯನದ ಪ್ರವಚನಕಾರ
ಪರಮಾತ್ಮ ಧರ್ಮ ಮಾನವ ಕುಲ ಎಲ್ಲವೂ ಒಂದೇ ಎಂದು ಸಾರಿದರು ಇಬ್ರಾಹಿಂ ಸುತಾರ 

ಆಧ್ಯಾತ್ಮಿಕ ಚಿಂತಕರು ಸರ್ವಧರ್ಮಗಳ ಸಮನ್ವಯ ಭಾವದವರು ಇವರು 
ಕನ್ನಡ ರಾಜ್ಯೋತ್ಸವ, ಪದ್ಮಶ್ರೀ ಪ್ರಶಸ್ತಿಗಳಿಂದ ಪುರಸ್ಕೃತರು ಇಬ್ರಾಹಿಂ ಸುತಾರ 

ಮತಗಳೆಂಬ ಬಣ್ಣ ಬಣ್ಣದ ಹೂವುಗಳನ್ನು ಒಂದುಗೂಡಿಸಿದ ಗುಲ್ದಸ್ಥ ನಮಗೆಲ್ಲ 
ಜನ ಮನಗಳಲ್ಲಿ ಭಾವೈಕ್ಯತೆಯ ಸುಗಂಧ ಹಬ್ಬಿಸಿದರು ಇಬ್ರಾಹಿಂ ಸುತಾರ 

ಬಡತನದಲ್ಲಿ ಬೆಂದು ಪ್ರಾಮಾಣಿಕ ದೇಶ ಸೇವೆಗೈದ ಮಹಾ ಲಿಂಗ ಪುರ ದವರು 
"ಮಾಜಾ" ಜಾತಿ ವಾಚಕ ಪದಗಳಲ್ಲ ತತ್ವ ವಾಚಕ ಪದಗಳೆಂದು ಅರುಹಿದರು ಇಬ್ರಾಹಿಂ ಸುತಾರ 

- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...