ಶುಕ್ರವಾರ, ಫೆಬ್ರವರಿ 11, 2022

ಹೊಂಗಿರಣ (ಕವಿತೆ) - ರಾಕೇಶ್.ಎಂ.

ಭಾಸ್ಕರನ ಕಿರಣ ಧರೆಗಿಳಿದಿದೆ 
ಹೊಂಬೆಳಕಿನ ಆರತಿಯ ಮಾಡಿದೆ 
ಹೊಸ ಬೆಳಕು ಹೊಸ ಹುಮ್ಮಸ್ಸು 
ದಿನವೂ ಮೂಡಿಸುವನು ಹೊಸ ಮನಸ್ಸು 

ಬರುವನು ಪ್ರತಿದಿನವು ಹೊಸ ಸಂದೇಶದಿ 
ಹುಟ್ಟು ಮೂಡಣದಿ 
ಮುಳುಗುವನು ಪಡುವಣದಿ 
ಮೂಡಿ ಮುಳುಗುವ ಆಟ ಅಂಗಳದಿ 

ತಾಯಿಯ ಗರ್ಭದಿ ಜನಿಸಿದ ಕಂದ 
ಧರೆಯ ನೋಡಲೆಂದು ಬಂದ 
ಪಕ್ಕಿಗಳು ಮಾಡಿದೆ ನಿನಾದ 
ಮೂಡಿಸಿದೆ ಹೊಸ ಭರವಸೆಯ ಇನಾದ 

ಯಾರೂ ಕರೆಯದಿದ್ದರೂ ಬರುವನು ಸೂರ್ಯ 
ದಿನವೂ ಮರೆಯದೆ ಮಾಡುವನು ಅವನ ಕಾರ್ಯ 
ಯಾರೂ ಹೊಗಳ ಬೇಕಿಲ್ಲ ತೆಗಳ ಬೇಕಿಲ್ಲ 
ಪ್ರಶಂಸೆ ಬಿರುದನವ ಬಯಸಲಿಲ್ಲ 

- ರಾಕೇಶ್.ಎಂ.
ಯುವ ಬರಹಗಾರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...