ಶುಕ್ರವಾರ, ಫೆಬ್ರವರಿ 11, 2022

ಖಾಲಿ ಕಾಗದ ; ಪುಟ ತುಂಬಿಸುವ ಹಠ (ಗದ್ಯ ಕವಿತೆ) - ಶಾಂತಾರಾಮ ಶಿರಸಿ.

ನೋಡಲು ಬರಿಯ ಖಾಲಿ ಕಾಗದ,
ಖಾಲಿ ಕಾಗದ ಪುಟ ತುಂಬಿಸುವ ಹಠ ಇರಬೇಕು ಸದಾ,
ಮನಸಿನ ಭಾವನೆಗಳನು/ಕಲ್ಪನೆಗಳನು ಬರಹ ರೂಪಕ್ಕಿಳಿಸುವುದ,
ಖಾಲಿ ಕಾಗದದ ಮೇಲೆ ಮುತ್ತುಗಳಂತೆ ಅಕ್ಷರಗಳನು ಪೋಣಿಸುವುದ,
ಚಿತ್ರಗಳ ಗೀಚುವುದ-ರಂಗುರಂಗಿನ ಬಣ್ಣಗಳ ತುಂಬಿಸುವುದ,
ಅಕ್ಷರಗಳ ಪೋಣಿಸಿದರೆ-ರಂಗಿನ ಬಣ್ಣಗಳ ತುಂಬಿಸಿದರೆ  ಹೆಚ್ಚಾಗುವುದು ಕಾಗದದ ಅಂದ,
ಅದ ನೋಡಿದರೆ ಈ ಮನಸಿಗೆ ಉಲ್ಲಾಸ -ಹೊಸ ಸ್ಪೂರ್ತಿ ಆನಂದ...

ಬದುಕೂ ಸಹ ಖಾಲಿ ಕಾಗದ,
ತುಂಬಿಸಬೇಕು ಯೋಚನೆಯ ದುಡಿಮೆಯಿಂದ,
ಮನಸುಗಳ ಬೆಸುಗೆಯ ಪ್ರೀತಿಯಿಂದ,
ಕಷ್ಟವಾದರೂ ಇಷ್ಟಪಟ್ಟು ಬದುಕೆಂಬ ಕಾಗದದ ಮೇಲೆ ಭರವಸೆ-ನಂಬಿಕೆಗಳನು ಧೈರ್ಯದಿಂದ ಗಟ್ಟಿಯಾಗಿ ಅಚ್ಚಾಗಿ ಗೀಚಬೇಕು,
ನೋವು,ದು:ಖ,ನಿರಾಸೆಗಳ ಅಳಿಸಬೇಕು,
ನಗುವು ತುಂಬಿ ನಲಿಯುತಿರಬೇಕು
ಸೋಲುಗಳ ಸುಧಾರಿಸಿ ಗೆಲುವಿನ ಗುರಿಯ ತಲುಪಬೇಕು,
ನಲಿವು,ಸು:ಖ,ಪ್ರೀತಿ-ಮಮತೆ,ಸಂತೋಷ,ನೆಮ್ಮದಿ ತುಂಬಿದ ಕಾಗದದ ಮೇಲಿನ ರಂಗು-ರಂಗಿನ ಚಿತ್ತಾರದ ಮುತ್ತಿನಂತೆ ಪೋಣಿಸಿರುವ ಹೊಳೆಯುವ  ಅಕ್ಷರಗಳಂತೆ ಬದುಕಬೇಕು,
ಈ ಬದುಕು ಇತರರಿಗೆ ಮಾದರಿಯಾಗಬೇಕು- ಸ್ಪೂರ್ತಿ ತುಂಬಬೇಕು...

- ಶಾಂತಾರಾಮ ಶಿರಸಿ,
ಉತ್ತರ ಕನ್ನಡ.
8762110543
7676106237


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...