ಹಿಜಾಬ್ ರಾಜಕೀಯ ಶುರುವಾಯ್ತು
ವಿದ್ಯಾರ್ಥಿಗಳ ಮನಸ್ಸು ಒಡೆಯಿತು
ಜ್ಞಾನ ಕಲಿಸಿದ ಸರಸ್ವತಿ ಕೂಗುಮರೆತು ಹೋಯ್ತು
ಸಹೋದರರ ನಡುವೆ ಬಿರುಕು ಬಂದಿತು ||
ಮೊಟ್ಟೆ ಆಟ ಮುಗಿಸಿದರು
ಹಿಜಾಬ್ ವಿಷಯ ತೆಗೆದುಕೊಂಡರು
ಸಮಾನತೆಯ ಮಧ್ಯೆ ಬೆಂಕಿ ಹಚ್ಚಿದರು
ಆಟ ನೋಡುತ್ತಾ ನಗುತಿರುವರು ||
ಧರ್ಮ ರಾಜಕೀಯ ಶುರುಮಾಡಿದರು
ಮುಗ್ಧ ಮನಸ್ಸುಗಳಿಗೆ ವಿಷ ತುಂಬಿದವರು
ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ
ಸೋದರರ ಹೃದಯ ಚೂರು-ಚೂರು ಮಾಡಿದರು ||
ನಾವೆಲ್ಲರೂ ಒಂದೇ ಎಂದರು
ಹಿಂದಿಂದೆ ರಾಜಕೀಯದ ಮೂಗು ತೂರಿಸಿದರು
ಅಣ್ಣ-ತಂಗಿ ಮಧ್ಯೆ ಬೆಂಕಿ ಹಚ್ಚಿದರು
ಹಿಜಾಬ್ ವಿಷಯ ತೆಗೆದು ದೂರ ಮಾಡಿದರು ||
ವಿದ್ಯಾಲಯದಲ್ಲಿ ಸಮಾನತೆಯಿಂದ ಇರೋಣ
ಸಮಾನತೆಯ ಸಸಿ ನೆಟ್ಟು ಬೆಳೆಸೋಣ ಪ್ರೀತಿಯನ್ನು ಉಳಿಸೋಣ
ಧರ್ಮಗಳ ಭೇದ ಭಾವದ ಕಳೆಯನ್ನು ಕಿತ್ತೊಗೆಯೋಣ
ಸರಸ್ವತಿ ಸಾಲುಗಳನ್ನು ಮತ್ತೆ ನೆನೆಯೋಣ
ರಾಜಕೀಯದ ವಿಷಬೀಜಗಳಿಂದ ದೂರ ಇರೋಣ
ನಿರ್ಮಲತೆಯ ಮನವೆಂಬ ಕೊಳ ಕಲಕದಂತೆ ನೋಡಿಕೊಳ್ಳೋಣ ||
- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ