ಶುಕ್ರವಾರ, ಫೆಬ್ರವರಿ 11, 2022

ಕಲಕದಿರಲಿ ಮನ (ಕವಿತೆ) - ಮೊಹಮ್ಮದ್ ಅಜರುದ್ದೀನ್

ಹಿಜಾಬ್ ರಾಜಕೀಯ ಶುರುವಾಯ್ತು
ವಿದ್ಯಾರ್ಥಿಗಳ ಮನಸ್ಸು ಒಡೆಯಿತು
ಜ್ಞಾನ ಕಲಿಸಿದ ಸರಸ್ವತಿ ಕೂಗುಮರೆತು ಹೋಯ್ತು
ಸಹೋದರರ ನಡುವೆ ಬಿರುಕು ಬಂದಿತು ||

ಮೊಟ್ಟೆ ಆಟ ಮುಗಿಸಿದರು
ಹಿಜಾಬ್ ವಿಷಯ ತೆಗೆದುಕೊಂಡರು 
ಸಮಾನತೆಯ ಮಧ್ಯೆ ಬೆಂಕಿ ಹಚ್ಚಿದರು  
ಆಟ ನೋಡುತ್ತಾ ನಗುತಿರುವರು ||

ಧರ್ಮ ರಾಜಕೀಯ ಶುರುಮಾಡಿದರು  
ಮುಗ್ಧ ಮನಸ್ಸುಗಳಿಗೆ ವಿಷ ತುಂಬಿದವರು  
ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ
ಸೋದರರ  ಹೃದಯ ಚೂರು-ಚೂರು  ಮಾಡಿದರು ||

ನಾವೆಲ್ಲರೂ ಒಂದೇ ಎಂದರು  
ಹಿಂದಿಂದೆ ರಾಜಕೀಯದ ಮೂಗು ತೂರಿಸಿದರು 
ಅಣ್ಣ-ತಂಗಿ ಮಧ್ಯೆ ಬೆಂಕಿ ಹಚ್ಚಿದರು  
ಹಿಜಾಬ್ ವಿಷಯ ತೆಗೆದು ದೂರ ಮಾಡಿದರು  ||

ವಿದ್ಯಾಲಯದಲ್ಲಿ  ಸಮಾನತೆಯಿಂದ ಇರೋಣ  
ಸಮಾನತೆಯ ಸಸಿ ನೆಟ್ಟು ಬೆಳೆಸೋಣ ಪ್ರೀತಿಯನ್ನು ಉಳಿಸೋಣ  
ಧರ್ಮಗಳ ಭೇದ ಭಾವದ ಕಳೆಯನ್ನು ಕಿತ್ತೊಗೆಯೋಣ
ಸರಸ್ವತಿ ಸಾಲುಗಳನ್ನು ಮತ್ತೆ ನೆನೆಯೋಣ  
ರಾಜಕೀಯದ ವಿಷಬೀಜಗಳಿಂದ ದೂರ ಇರೋಣ  
ನಿರ್ಮಲತೆಯ ಮನವೆಂಬ ಕೊಳ ಕಲಕದಂತೆ ನೋಡಿಕೊಳ್ಳೋಣ ||

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...