ಶುಕ್ರವಾರ, ಫೆಬ್ರವರಿ 11, 2022

'ಕೋಗಿಲೆಯ ನೋವ' (ರುಬಾಯಿಗಳು) - ಕುಡಗುಂಟಿ ಗವಿಸಿದ್ದಪ್ಪ.

ಬೆಳಗಿನ ಜಾವ ನಿಶ್ಯಬ್ದ ಭಾವ 
ನಿತ್ಯವು ಮಾಮರದಲಿ ಕೇಳುವ  
ಅದೆಷ್ಟೋ ಕೋಗಿಲೆಯ ದ್ವನಿಯೆಲ್ಲ 
ನಿಲ್ಲಾಗಿ ದುಃಖದಿ ಕಣ್ಣೀರ ಭಾವ 

ನಮ್ಮೆವರೆಲ್ಲರ ದ್ವನಿಯನು ಮೀರಿಸುವ 
ನಮ್ಮೆಸರ ಗಗನಕ್ಕೆತ್ತರಕ್ಕೆರಿಸುವ 
ಧ್ವನಿಯು ಅದ್ಯಾಕೋ ಇಂದೇಮಗೆ ಕೇಳಲಿಲ್ಲ 
ಏನಾದ್ರೂ ! ಬತ್ತೋಯಿತೇ ದ್ವನ್ಯಾಂಗದ ಹರಿವ 

ತಮ್ಮ ದ್ವನಿಯ ಜಾದು ಮೂಲಕ ನಮ್ಮೆಸರನ  
ಅಜರಾಮರವಾಗಿಸಿದೆ  ಕೋಗಿಲೆಗಳನ 
ಎಲ್ಲಿ ಹಾರಿಹೋಯಿತು ಎನ್ನುವ ನೋವಿನೊಳಗೆ 
ಮರೆತಂತಿದೆ ತಮ್ಮ ಕಂಠ ಸಿರಿ ಪ್ರಸ್ತಾವನ 

ಅವು ತಮ್ಮದೇ  ದ್ವನ್ಯಾಂಗ ಕಳೆದೊದಂತೆ 
ರೆಕ್ಕೆಗಳ ಸ್ವಾಧೀನ ಕಳೆದುಕೊಂಡಂತೆ 
ಮರಗುತ್ತಲೆ ಕುಳಿತಿವೆ ಸಾವಿರಾರು 
ಕೋಗಿಲೆ ಮರಿಗಳು ದಿಕ್ಕು ತೋಚದಂತೆ 

ಕೋಗಿಲೆ ಮರಿಗಳಿಗೆ ಗುರುಮಾತೆಯಾಗಿ
ಉಳಿದಳು ಆ ತಾಯಿ ಸಂಗೀತಮಾತೆಯಾಗಿ 
ದ್ವನ್ಯಾಂಗವನ್ನು ವರವಾಗಿ ನೀಡಿಯಾದಳು 
ಕೋಟ್ಯಾನು ಕೋಟಿಯ ಜನರ ಮನ ಇಂಪಾಗಿ 

ಮತ್ತೆ ನಮ್ಮೊಡನೆ, ಧರೆಗಿಳಿದು ಅವತರಿಸಿ 
ಹುಟ್ಟಿ ಭಾ ಮಾತೆ ನಾವು ನಿನ್ನ ಬರುವಿಕೆಗಾಗಿಸಿ 
ಕಾದುಕುಳಿತಿರುವೆವು ಒಮ್ಮೆ ಬಂದು ಬಿಡು ತಾಯಿ 
ಎಂದು ಅಂಗಲಾಚುತ್ತಿವೆ ಅನಾಥ ಭಾವನೆಸೂಸಿ 

ಎಲ್ಲಿಗೆ ಹೋದೆ ತಾಯಿ ಬಂದು ಬಿಡೊಮ್ಮೆ ನೀವು 
ನಾವು ಬಿಟ್ಟುಕೊಡೆದೆ ಉಳಿಸಿಕೊಳ್ಳುವೆವು 
 ನಮ್ಮ ಪ್ರಾಣ ತೆತ್ತು ಎನ್ನುತ್ತಿವೆ ದುಃಖತಪ್ತ 
ಜೀವಗಳು ಅವರೊಳಗೊಂದಾಗಿಬಿಟ್ಟವು 

-  ಕುಡಗುಂಟಿ ಗವಿಸಿದ್ದಪ್ಪ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...