ಒಣಗಿದೆದೆಗೆ ನಿನ್ನ ಪ್ರೀತಿ
ಒರತೆಯಾಗಿದೆ
ಮಳಗೆ ಭೂಮಿ ನೆನೆದ ಹಾಗೆ
ಮನವು ಅರಳಿದೆ
ಬೆಂಕಿಯಂತೆ ದಹಿಸೊ ಚಿಂತೆಗೆ
ಮಂಜೆ ಆದೆ ನೀ
ಬೆಳವ ಚಂದ್ರನ ಹಾಗೆ ದಿನವು
ಒಲವು ತಂದೆ ನೀ
ನಾಳೆ ಸೂರ್ಯನ ಬೆಳಗಿನಂತೆ
ಖಾತ್ರಿ ಬದುಕಿಗೆ
ಹಾಲು ಜೇನಿನ ಸವಿಯ ಹಾಗೆ
ಹೆಣ್ಣೆ ಬದುಕಿಗೆ
ನೆನೆಪೆ ನಿನದು ಗಂಧದಂತೆ
ಬದುಕಿನಾಟದಿ
ಕಷ್ಟ ಕರಗೊ ಮೋಡದಂತೆ
ನಿನ್ನ ಮಾತಿದೆ
ಏರು ಇಳುವಿನ ಅಲೆಗಳಂತೆ
ನೋವು ನಲಿವಿದೆ
ಜಗವು ಮೆಚ್ಚುವಂತೆ ಬಾಳಿ
ಧನ್ಯರಾಗುವ
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು ಸಿಂಧನೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ