ಭಾನುವಾರ, ಏಪ್ರಿಲ್ 17, 2022

ಸಮರವು ಬೇಡ (ಕವಿತೆ) - ರಾಜು ನಂಜಪ್ಪ, ನೆಲಗದರನಹಳ್ಳಿ.

ಎಷ್ಟೆಲ್ಲಾ ಆಯುಧ
ಎಷ್ಟೆಲ್ಲಾ ಸೈನಿಕರು
ಒಂದು ದೇಶದ ಮೇಲೆ
ಇನ್ನೊಂದು ದೇಶ
ಹನ್ನೊಂದು ದೇಶದ ಮೇಲೆ
ಮತ್ತೊಂದು ದೇಶ
ಹೆಣಗಳ ಲೆಕ್ಕ ತಪ್ಪಬಾರದು
ಒಂದು ತಲೆಗೆ ಎರಡೂ ತಲೆ
ಹತ್ತು ತಲೆಗೆ ಇಪ್ಪತ್ತು
ದೇಶಕೆ ಇದೆ ಆಪತ್ತು
ಪರಮಾಣು ಅಸ್ತ್ರ
ನೋಡಿ ಜಲಜಾಸ್ತ್ರ
ಲಕ್ಷ ಭುವಿಯ ಸುಡುವ
ಸಾಮರ್ಥ್ಯವಿದೆ ನಮಗೆ
ಒಂದು ಭುವಿಯ ಹುಟ್ಟು
ನಮಗಿಲ್ಲ ಯೋಗ್ಯತೆ
ಕರುಣೆಯ ಕಣ್ಣು
ಹಿಂಗಿ ಹೋಗಿದೆ
ಮಿಲಿಟರಿಗೆ ಹಣ
ನೀರಿನಂತೆ ಹರಿದಿದೆ
ಹೆಣಗಳ ಬಾಚಲು
ಕಾದಿವೆ ಪಿಶಾಚಿಗಳು
ನೆಮ್ಮದಿಯ ನಾಳೆ
ಯಾರಿಗೂ ಬೇಕಿಲ್ಲ
ರಕ್ತವನ್ನು ಕುಡಿಯಲು 
ಭೂತಾಯಿ ಬಯಸಿಲ್ಲ 
ರಕ್ಷಿಸಲು ಯುದ್ಧವಿರಲಿ
ಭಕ್ಷಿಸಲು ಬೇಡ 
ಸಮರವೇ ಜೀವನವಲ್ಲ
ಸಮರಸವು ಜೀವನ!! 
- ರಾಜು ನಂಜಪ್ಪ, ನೆಲಗದರನಹಳ್ಳಿ, ಬೆಂಗಳೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...