ಭಾನುವಾರ, ಏಪ್ರಿಲ್ 17, 2022

ಶ್ರೇಷ್ಠ ಮಹಾನಾಯಕ(ಕವಿತೆ) - ವೈಷ್ಣವಿ ರಾಜಕುಮಾರ್, ಕರಕ್ಯಾಳ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ 
ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ,
ದೇಶಕ್ಕೆ ಭದ್ರಬುನಾದಿ ಒದಗಿಸಿದ್ದಾರೆ,
ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ,
ಆ ಗ್ರಂಥದ ನಿಯಮಗಳು ಪಾಲಿಸಬೇಕೆಂದು ಹೇಳಿದ್ದಾರೆ,
ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕೆಂದು ಹೇಳಿದ್ದಾರೆ,
ಮಹಾನ್ ಮಾನವತಾವಾದಿ ಡಾll ಬಿ ಆರ್ ಅಂಬೇಡ್ಕರ್.

ಅವರ ಒಂದೊಂದು ಮಾತುಗಳು ಅದ್ಭುತ,
ಕೇಳಿದ ಕಿವಿಗಳಿಗೆ ಸ್ಫೂರ್ತಿದಾಯಕ,
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ,
ಭಾರತಕ್ಕೆ ಒಂದು ದೊಡ್ಡ ಕೊಡುಗೆ ನೀಡಿದ ಪ್ರಸಿದ್ಧ ನಾಯಕ.

ಕೀಳು ಜಾತಿಯವರೆಂದು ಅವಮಾನ ಮಾಡಿದರು,
ಅವಮಾನ ಪಡೆಯಲಿಲ್ಲ ಆ ನಾಯಕ,
ಎಲ್ಲಿ ಅವಮಾನ ಇದೆಯೋ ಅಲ್ಲಿ ಗೆಲುವು ಇದೆಯೆಂದು
ಎದ್ದುನಿಂತಿದ ಮಹಾನಾಯಕ,
ಡಾll ಬಿ ಆರ್ ಅಂಬೇಡ್ಕರ್.

ಅವರು ಮಾಡಿದ ಸಾಧನೆಗಳು,
ಅವರು ನಮಗೆ ಕೊಟ್ಟ ಕೊಡುಗೆಗಳು,
ನಮ್ಮ ಜೀವನದ ಅಸ್ತ್ರವಾಗಿವೆ,
 ನಮಗೆ ಬದುಕಲು ಸ್ಪೂರ್ತಿ ತುಂಬಿದ್ದಾರೆ,
ಡಾll ಬಿ ಆರ್ ಅಂಬೇಡ್ಕರ್. ಜೈ ಭೀಮ್.

- ವೈಷ್ಣವಿ ರಾಜಕುಮಾರ್, ಕರಕ್ಯಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...