ಭಾನುವಾರ, ಏಪ್ರಿಲ್ 17, 2022

ಪ್ರೀತಿ - ಪ್ರೇಮಕೆ ಬಲಿಯಾಗದಿರು (ಕವಿತೆ) - ಬಸವರಾಜ.ಹೆಚ್.ಹೊಗರನಾಳ

ಅಂದವ ನೋಡಿ ಮರುಳಾದೆ
ಚೆಂದದ ಮಾತಿಗೆ ಬೆರಗಾದೆ |
ಸಿಗುವಿ  ಎಂದು ಭಾವಿಸಿ
ಹಲವಾರು ಕನಸ ಕಟ್ಟಿದೆ ll
    
ನೀನು ಸಿಕ್ಕರೆ ಸಾಧನೆಗೆ ಮೀರಿದ ಮಾತೇ ಇಲ್ಲ ಎಂದೇ
ನಿನ್ನ ಪ್ರೀತಿಯ ಮುಂದೆ ಬೇರವಾ ಪ್ರೀತಿಯು ಇಲ್ಲ ಎಂದೇ |
ಆದರೇ ಪ್ರೀತಿಸುವ ಮುನ್ನ ಯೋಚಿಸಲೇ ಇಲ್ಲ ಊಸರವಳ್ಳಿಯಂತ ನಿನ್ನ ಭಾವಗಳ ಬದಲಾವಣೆಯನ್ನು
 ನಾ ಕಾಣಲೇ ಇಲ್ಲಲ್ಲಿll

ಕಣ್ಣಿಗೆ ಕಾಣುವ ಛಾಯೆಗೆ ನಾ ಮರುಳಾದೆ
ನಕ್ಕು - ನಗಿಸುವ ನಾಟ್ಯಕ್ಕೆ ನಾ ಬೆರಗಾದೆ |
ಬಿಟ್ಟು ಹೋಗುವ ಕೆಟ್ಟ ಪ್ರೀತಿಗೆ ನಾ ಮರುಗಿದೆ
ದಿಟ್ಟ ನಿರ್ದಾರವ ತೊರೆದು ದಟ್ಟ ಭಾವನೆಗಳ ಮೋಹದಿ ಸಿಲುಕಿದೆll

ನಡೆಯಲೇ ನಾ ಈ ಪ್ರೀತಿಯ ಹಿಂದೆ,
ಬದಲಾಗಬಹುದಾಗಿದೆ ನನ್ನ ಬದುಕು ಇಂದೇ |
 ಈ ಹಿಂದೆ-ಮುಂದಿನ ಬದುಕಿಗೆ ಇಂದಿನ ಪಯಣವೇ ಕಾರಣ 
ಈಗಿನ ಕ್ಷಣಗಳೇ ನೀಡುವುದು ನಮ್ಮ ಬದುಕಿಗೆ ಪ್ರೇರಣೆ ll

ಕಲಿಯಲು ಬಂದೇ ನಾ ಹಲವಾರು ಕನಸ ಹೊತ್ತು,
ಕನಸಿಗಾಗಿ ತೊರೆದು ಬಂದೇ ಅಮ್ಮನ ಪ್ರೀತಿಯ ತುತ್ತು | ಮರುಳಾಗಿಸಿ ನರಳಾಡಿಸಿದೆ ಇಲ್ಲಿ ಪ್ರೀತಿ -ಪ್ರೇಮದ ಮತ್ತು,
ಮತ್ತೆ ತೊರೆದು ನಡೆದರೇ ಇವೆಲ್ಲವನು ಈ ಹೊತ್ತು |
ಮುಂದೊಂದು ದಿನ ಜಗವೇ ಮೆರೆಸುವುದು
ನನ್ನ ಹೆಗಲ ಮೇಲೆ ಹೊತ್ತುll
     
- ಬಸವರಾಜ.ಹೆಚ್.ಹೊಗರನಾಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...