ಮಂಗಳವಾರ, ಮೇ 17, 2022

ಗಜಲ್ - ಐಶ್ವರ್ಯಾ ಶ್ರೀ, ಶರೆಗಾರ.

ಕಾರ್ಮೋಡ ಕವಿದಿಹುದು ನೀನಿರದೆ ಈ ಬಾಳಲ್ಲಿ 
ಹಗಲಿರುಳು ಒಂದೇ ನೀನಿಲ್ಲದೆ ಈ ಬಾಳಲ್ಲಿ 

ಬೆಳದಿಂಗಳ ಬೆಳಕು ನೀನಾಗಿ ಬಂದೆ
 ಸ್ವರ್ಗದ ಮೇನಕೆ ನೀನಾದೆ ಈ ಬಾಳಲ್ಲಿ 

ಅನುದಿನವು ಪ್ರೀತಿಯ ಕಾಲ್ಗೆಜ್ಜೆ ತೋಡಿಸುವೆ 
ಪರಿಮಳದ ಹೂವಂಗೆ ಅರಳಿದೆ ಈ ಬಾಳಲ್ಲಿ 

ಕರಿಮೋಡ ಸರಿಸಿ ನೀನಿಳಿದೆ ನನ್ನರಸಿ 
ನಾ ಕಂಡ ಕನಸಿನ ಅರ್ಧಾಂಗಿಯಾದೆ ಈ ಬಾಳಲ್ಲಿ 

ಕಾಮನ ಬಿಲ್ಲಿನ ಬಳೆಗಳ ತೋಡಿಸುವೆ 
ನನ್ನ ಹೃದಯದ ಒಡತಿಯಾದೆ ಈ ಬಾಳಲ್ಲಿ 

ರೆಪ್ಪಯ ಮಿಟುಕಿಸದೆ ಕಾಯ್ದಿದ್ದ ಈ ರಾಮ 
ತಂಗಾಳಿ ತಂಪಂತೆ ನೀ ಬಂದಿಳಿದೆ ಈ ಬಾಳಲ್ಲಿ. 

 - ಐಶ್ವರ್ಯಾ ಶ್ರೀ, ಶರೆಗಾರ, ಯರಗಟ್ಟಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...