ಮಂಗಳವಾರ, ಮೇ 17, 2022

ಮುದ್ದು ಬಂಗಾರ (ಕವಿತೆ) - ಶಿವಾ ಮದಭಾಂವಿ.

ಮುದ್ದುಕಂದ ಮಲಗೆನ್ನ ಬಂಗಾರ
ಬಂದಿಹನು ಆಗಸದಲಿ ಚಂದಿರ

ನಗುವ ಹಂಚಿ ನಲಿವೆ ಚೆಂದ
ನಿನ್ನ ತೋದಲ್ನುಡಿಯೇ ಕರ್ಣಾನಂದ

ಮನೆ ಮನಕ್ಕೆಲ್ಲ ರಸದೌತನ ನಿನ್ನಿಂದ 
ಇಳೆಗೆ ಸ್ವರ್ಗ ಬಂದಿದೆ ಅರಿವಿಲ್ಲದಂಗ

ನಗುತಿಹನು ಚಂದಿರ ನಿನ್ನ ತುಂಟಾದಿಂದ
ಯಾವಾಗಲೂ ಹೀಗೆ ಇರು ಅದುವೇ ನಮಗಾನಂದ

ಮೆಲ್ಲಗೆ ಬೀಸುತಿಹುದುತಂಗಾಳಿ
ಬರುತಿಹಳು ನಿದ್ರಾದೇವಿ ಓಡೊಡಿ

ಜಾಣ ಕಂದಮ್ಮ ನನ್ನುಸಿರು ನೀನು
ಯಾರ ದೃಷ್ಟಿಯೂ ಬಿಳದಂಗೆ ಕಾಪಾಡುವೆ ನಾನು

ನಿದ್ರೆ ಬರಲಿ  ನಾಳೆಯ ನಗುವಿಗಾಗಿ
ಹಾಡುವೇ ಲಾಲಿಯ ನಿನಗೆ ಸವಿಯಾಗಿ

ಕೊಡುವೆ ಮುತ್ತೊಂದು ಮುದ್ದು ಜಾಣೆಗೆ
ಜಾರು ಜಾರಮ್ಮ ನೀ ಒಳ್ಳೆಯ ನಿದ್ರೆಗೆ

 - ಶಿವಾ ಮದಭಾಂವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...