ಮಂಗಳವಾರ, ಆಗಸ್ಟ್ 2, 2022

ಬಾ ಮಳೆಯೇ ಬಾ (ಕವಿತೆ) - ಶಾಂತಾರಾಮ ಶಿರಸಿ.

ನಾನು ನಿನಗಾಗಿ ಕಾದಿರುವ ಕಡಲು,
ಹನಿ ಹನಿಯಾಗಿ ಸುರಿದು,
ಈ ಭುವಿಯ ದಾಹವ ಇಂಗಿಸಲು,
ಮನುಜರು ಮಾಡಿಹ ಕೊಳೆಯ ತೊಳೆದು ಸ್ವಚ್ಚಾವಾಗಿಸು ಬಾ,
ಮಿಕ್ಕಿದ್ದು ನೀರಾಗಿ ಉಕ್ಕಿ ಹರಿಯಲು,
ಬಾ ಮಳೆಯೇ ಬಾ
ಕಡಲ ಒಡಲ ಸೇರಲು..

ಬಿಸಿಯಾಗಿ ಒಣಗಿಹ ಈ ಭೂ ಸಿರಿಯ ತಣಿಸಿ ಹಸಿರಾಗಿಸು ಬಾ,
ಭುವಿಯ ಉಳುವ ರೈತನ ಮೊಗದಲಿ ನಗುವ ತರಿಸು ಬಾ,
ಹನಿಗಳಾಗಿ ಸುರಿದು ಬೇಸರದಿ ಮನಕೆ ನೀರಾಗಿ ಸೋಕಿ ಅಪ್ಪಿಕೊಳ್ಳು ಬಾ,
ನಿನ್ನ ಹನಿಗಳಲ್ಲಿ ಮೈ ಒಡ್ಡಿ ಕುಣಿಯಬೇಕೆಂಬ ಈ ಮನದಾಸೆಯ ತೀರಿಸಲು ಬಾ ಮಳೆಯೇ ಬಾ...

- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
7676106237



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...