ನಾನು ನಿನಗಾಗಿ ಕಾದಿರುವ ಕಡಲು,
ಹನಿ ಹನಿಯಾಗಿ ಸುರಿದು,
ಈ ಭುವಿಯ ದಾಹವ ಇಂಗಿಸಲು,
ಮನುಜರು ಮಾಡಿಹ ಕೊಳೆಯ ತೊಳೆದು ಸ್ವಚ್ಚಾವಾಗಿಸು ಬಾ,
ಮಿಕ್ಕಿದ್ದು ನೀರಾಗಿ ಉಕ್ಕಿ ಹರಿಯಲು,
ಬಾ ಮಳೆಯೇ ಬಾ
ಕಡಲ ಒಡಲ ಸೇರಲು..
ಬಿಸಿಯಾಗಿ ಒಣಗಿಹ ಈ ಭೂ ಸಿರಿಯ ತಣಿಸಿ ಹಸಿರಾಗಿಸು ಬಾ,
ಭುವಿಯ ಉಳುವ ರೈತನ ಮೊಗದಲಿ ನಗುವ ತರಿಸು ಬಾ,
ಹನಿಗಳಾಗಿ ಸುರಿದು ಬೇಸರದಿ ಮನಕೆ ನೀರಾಗಿ ಸೋಕಿ ಅಪ್ಪಿಕೊಳ್ಳು ಬಾ,
ನಿನ್ನ ಹನಿಗಳಲ್ಲಿ ಮೈ ಒಡ್ಡಿ ಕುಣಿಯಬೇಕೆಂಬ ಈ ಮನದಾಸೆಯ ತೀರಿಸಲು ಬಾ ಮಳೆಯೇ ಬಾ...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
7676106237
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ