ಮಂಗಳವಾರ, ಆಗಸ್ಟ್ 2, 2022

ನಿತ್ಯ ಕಾಯಕವಾಸಿ (ಕವಿತೆ) - ರಾಕೇಶ್ ಡಿ ವೀರಾಪುರ.

ನಿತ್ಯ ಕಾಯಕವಾಸಿ ನಮ್ಮ ರೈತನು
ಬೇಸಾಯವ ಕಸುಬಾಗಿಸಿಕೊಂಡವನು
ಮಳೆಯ ನಡುವೆ ದುಡಿಯುವಾತನು
ವರ್ಷ ಪೂರ್ತಿ ಶ್ರಮ ಪಡುವ ಧೀರನು
 
ತಾನು ಹಸಿದಿದ್ದರೂ ಈ ನಮ್ಮ ರೈತನು
ದೇಶದ ಹೊಟ್ಟೆ ತುಂಬಿಸುವ ಗುಣದವನು
ತನಗಾಗಿ ಹೆಚ್ಚೇನು ನಿರೀಕ್ಷೆಯ ಮಾಡದವನು
ದೇಶಕ್ಕಾಗಿ ನಿತ್ಯ ಬೆವರ ಹನಿಯ ಬಸಿಯುವನು

 ಬಂದರೂ ಸಮಸ್ಯೆಗಳು ನೂರಾರು ಜೀವನದಿ
ಎದೆಗುಂದದೆ ದುಡಿಯುವ ನಿತ್ಯವು ಕಾಯಕದಿ
ಇದ್ದರೂ ಸಾಲದ ಮಾಡಿರುವ ಭಯವು ಮನದಿ
ನಂಬಿಕೆ ಇಡುವ ಒಳ್ಳೆಯ ಫಸಲಿನ ನಿರೀಕ್ಷೆಯಲಿ

 ರೈತ ಬೆಳೆದ ಬೆಳೆಗಳಿಗೆ ಸಿಗದೆ ಬೆಂಬಲ ಬೆಲೆ
ಹೆಚ್ಚಾಗುತ್ತಿವೆ ರೈತರು ಕುಣಿಕೆಗೆ ಕೊಡುವ ತಲೆ
ಅರಿಯಬೇಕಿದೆ ನಾವೆಲ್ಲರೂ ಒಮ್ಮೆ ಅವನ ಬೆಲೆ
ಮಾಡದಿದ್ದರೆ ಸಹಾಯವ ಅಳಿವುದು ನಮ್ಮ ನೆಲೆ

ಹೆತ್ತ ತಾಯಿಯ ಮೇಲಿರುವಂತೆ  ಮಮಕಾರ
ಸ್ವಲ್ಪವಾದರೂ ಇರಲಿ ರೈತನ ಮೇಲೆ ಕನಿಕರ
ರೈತರಿದ್ದರೆ ಸೌಕ್ಯವು ನಮ್ಮೆಲ್ಲರ ಈ ಜೀವನ
ಅದನು ಅರಿತು ಅನ್ನದಾತರ ಗೌರವಿಸೋಣ.
- ರಾಕೇಶ್ ಡಿ ವೀರಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...