ಮಾಹೋದಲ್ಲಿ ಜನಿಸಿದ ವೀರ
ಮಹಿಳಾ ಸ್ವಾತಂತ್ರ್ಯ ನೀಡಿದ ಶೂರ
ಸಮಾನತೆಯೆ ಜೀವಾಳವೆಂದರು
ದೀನ-ದಲಿತರಿಗೆ ಸ್ಪೂರ್ತಿಯಾದರು
ಭೀಮ ಯುಗದ ಆರಂಭವಾಯಿತು
ಮನುಸ್ಮೃತಿಯ ಧಹನವಾಯಿತು
ಅಷ್ಪ್ರೃಷ್ಯತೆಯ ಕ್ರಾಂತಿಯಾಯಿತು
ಭೀಮ ಜ್ಯೋತಿಯು ಬೆಳಗ ಹತ್ತಿತು
ಜ್ಞಾನ ಭಂಡಾರದ ಒಡೆಯನಿವನು
ಗ್ರಂಥ ಸಂಗ್ರಹಣೆಯ ಶ್ರೀಮಂತನಿವನು
ನೂಂದ ವರ್ಗಕೆ ದಾರಿದೀಪವು
ದೀನ-ದಲಿತರಿಗೆ ಸ್ಪೂರ್ತಿ ಚಿಲುಮೆಯು
ಹೆಜ್ಜೆ ಹೆಜ್ಜೆಗೂ ಅವಮಾನವಾದರೂ
ಪೆಟ್ಟು ತಿಂದಷ್ಟು ಗಟ್ಟಿಯಾದರೂ
ತನ್ನ ಜನಗಳ ಏಳಿಗೆ ಬಯಸಿ
ಹಗಲು ರಾತ್ರಿ ಅಧ್ಯಯನ ಮಾಡಿದರು
ಜಾತಿಗ್ರಸ್ತರಿಂದ ದೂರಲ್ಪಟ್ಟರು
ಪುಸ್ತಕ ಸಂಗದಲ್ಲಿ ನಲಿದಾಡಿದರು
ವಿಶ್ವ ನಡುಗಿಸುವ ಲೇಖನಿ ಹಿಡಿದು
ದೇಶಕೆ ಸಂವಿಧಾನ ಕೊಡುಗೆ ಕೊಟ್ಟರು
- ಐಶ್ವರ್ಯ ಎಸ್, ಶರೆಗಾರ, ಯರಗಟ್ಟಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ