ಬುಧವಾರ, ಆಗಸ್ಟ್ 17, 2022

ಭೀಮ ಜ್ಯೋತಿ (ಕವಿತೆ) - ಐಶ್ವರ್ಯ ಎಸ್, ಶರೆಗಾರ.

ಮಾಹೋದಲ್ಲಿ ಜನಿಸಿದ ವೀರ 
ಮಹಿಳಾ ಸ್ವಾತಂತ್ರ್ಯ ನೀಡಿದ ಶೂರ 
ಸಮಾನತೆಯೆ ಜೀವಾಳವೆಂದರು
ದೀನ-ದಲಿತರಿಗೆ ಸ್ಪೂರ್ತಿಯಾದರು
 
ಭೀಮ ಯುಗದ ಆರಂಭವಾಯಿತು
ಮನುಸ್ಮೃತಿಯ ಧಹನವಾಯಿತು
ಅಷ್ಪ್ರೃಷ್ಯತೆಯ ಕ್ರಾಂತಿಯಾಯಿತು
ಭೀಮ ಜ್ಯೋತಿಯು ಬೆಳಗ ಹತ್ತಿತು 
 
ಜ್ಞಾನ ಭಂಡಾರದ ಒಡೆಯನಿವನು 
ಗ್ರಂಥ ಸಂಗ್ರಹಣೆಯ ಶ್ರೀಮಂತನಿವನು
ನೂಂದ  ವರ್ಗಕೆ ದಾರಿದೀಪವು
ದೀನ-ದಲಿತರಿಗೆ ಸ್ಪೂರ್ತಿ ಚಿಲುಮೆಯು

ಹೆಜ್ಜೆ ಹೆಜ್ಜೆಗೂ ಅವಮಾನವಾದರೂ
ಪೆಟ್ಟು ತಿಂದಷ್ಟು ಗಟ್ಟಿಯಾದರೂ
ತನ್ನ ಜನಗಳ ಏಳಿಗೆ ಬಯಸಿ 
ಹಗಲು ರಾತ್ರಿ ಅಧ್ಯಯನ ಮಾಡಿದರು 

ಜಾತಿಗ್ರಸ್ತರಿಂದ ದೂರಲ್ಪಟ್ಟರು
ಪುಸ್ತಕ ಸಂಗದಲ್ಲಿ ನಲಿದಾಡಿದರು 
ವಿಶ್ವ ನಡುಗಿಸುವ ಲೇಖನಿ ಹಿಡಿದು
ದೇಶಕೆ ಸಂವಿಧಾನ ಕೊಡುಗೆ ಕೊಟ್ಟರು   

 - ಐಶ್ವರ್ಯ ಎಸ್, ಶರೆಗಾರ,  ಯರಗಟ್ಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...