ಮಂಗಳವಾರ, ಆಗಸ್ಟ್ 2, 2022

ಕಂಪು ಅಳಿಯದಿರಲಿ (ಕವಿತೆ) - ತುಳಸಿದಾಸ ಬಿ.ಎಸ್.

ದನಿ ಕೇಳಿ ಮನವು
ಕುಣಿದಂತೆ ನವಿಲು
ಜಾಣೆ ವಾರಿ ನೋಟಕೆ
ಇಣುಕಿದಂತೆ ಶಶಿಯು

ಚಿನ್ನ ನಿನ್ನ ನುಡಿಯು
ಜೇನಿನಂತೆ ಸವಿಯು
ಮನದ ಭಾವ ತಿಳಿಯಲು
ಮಿನುಗಿದಂತೆ ತಾರೆಯು

ತಾಳದಾದ ಬಯಕೆಗೆ
ಬಾಳೆಯಂತೆ ಬಾಗಿದೆ
ಗಳಿಸಿ ಪ್ರೀತಿ ನೆಲದ ಹಾಗೆ
ಅಳಿಯದಂತೆ ಉಳಿಯಲಿ

ಬೆಸೆದ ಬಂಧ ಹೂವಿನಂತೆ
ಉಸಿರು ಗಂಧ ಸೂಸಲಿ
ಹುಸಿಯದಂತೆ ಪ್ರೀತಿ ಬಳ್ಳಿ
ಹಸಿರು ಚದುರಿ ಹಬ್ಬಲಿ

ತಂಪನೆರೆವ ಗಾಳಿಯಂತೆ
ಗುಂಪು ಪ್ರೀತಿ ಸಾಗಲಿ
ಇಂಪು ಸುಖದ ನಿದ್ರೆಯಂತೆ
ಕಂಪು ಅಳಿಯದಿರಲಿ
- ತುಳಸಿದಾಸ ಬಿ. ಎಸ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...