ಮಂಗಳವಾರ, ಆಗಸ್ಟ್ 2, 2022

ಚಪ್ಪಲಿಗಳು (ಕವಿತೆ) - ಮಹಮ್ಮದ್ ರಫೀಕ್ ಕೊಟ್ಟೂರು.

ಚಪ್ಪಲಿಗಳು ತಾವೇ ಚಲಿಸಲಾರವು
ಮನೆ ಹೊರಗೇ 
ಒಂದು ಮತ್ತೊಂದರ ಸಾಂತ್ವಾನಗೈಯುತ
ಹೊರಗೇ 
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಬೆನ್ನ ಮೇಲೆ ಒಡೆಯನ 
ಕಾಲುಗಳು 
ಕಣ್ಣು ಕಿವಿಗಳ ಮುಚ್ಚಿಕೊಂಡಿಹವು
ತನ್ನವರು ಕಾಣದಂತೆ , ಕೇಳದಂತೆ
ಹೊರಗೇ 
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಕಲ್ಲು ಮುಳ್ಳುಗಳಿಗೆ 
ತನ್ನ ಎದೆಯೊಡ್ಡಿ 
ಕೊಚ್ಚೆಯಲೂ  ನಡೆಯುವ ಅವನ
ಕಾಲುಗಳ ಅಪ್ಪಿಕೊಂಡಿಹವು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಎದೆ ಸವೆದು ಬೆನ್ನು ಬಾಗಿದರೂ
ಬೆನ್ನು ಬಿಡದ ಅವನು 
ತುಳಿಯುತಿಹನು ತುಳಿಯುತಲೆ ಇಹನು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು.

  - ಮಹಮ್ಮದ್ ರಫೀಕ್ ಕೊಟ್ಟೂರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...