ಮಂಗಳವಾರ, ಆಗಸ್ಟ್ 2, 2022

ಪೂಜಿಸೋಣ ಬನ್ನಿ (ಕವಿತೆ) - ರತ್ನಾ ಕೆ.ಭಟ್ ತಲಂಜೇರಿ.

ಶ್ರಾವಣ  ಶುಕ್ಲ ಪಂಚಮಿ ಹಬ್ಬ
ನಾಗದೇವರ ಪೂಜಿಸೋಣ ಬನ್ನಿ
ಮಿಂದು ಮಡಿಯನುಟ್ಟು ಭಜಿಸಿ
ಮಂಗಳಾರತಿ  ಬೆಳಗೋಣ ಬನ್ನಿ

ಶುಚಿಯ ಮಾಡಿ ರಂಗೋಲಿ ಬಿಡಿಸಿ
ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ
ಮಣ್ಣಿನ ಋಣವ ತೀರಿಸೋಣ
ನಾಗಪ್ಪನ ಗುಣಗಾನ ಮಾಡೋಣ

ಅಣ್ಣ-ತಂಗಿ ಕರುಳ ಸಂಬಂಧ
ಬಿಡಿಸಲಾರದ ಒಲವ ಬಂಧ
ಸಂಸ್ಕೃತಿ ಸಂಸ್ಕಾರ ಆಚರಣೆಯು
ಭಾರತದ ನೆಲವು ಪುಣ್ಯ ಕಣವು

ಕೇದಗೆ ಅರಶಿನ ನಾಗ ಸಂಪಿಗೆ
ಸಿಂಗಾರ ಅರಳು ಸೀಯಾಳ ಹಣ್ಣು
ಕಲ್ಲನಾಗನಿಗೆ ನೊರೆ ಹಾಲು ಧಾರೆ
ಪೊರೆಯೊ ನಾಗಪ್ಪ ಕೇಳೋಣ ಬಾರೆ

ಜೋಕಾಲಿ ಕಟ್ಟಿ ಜೀಕೋಣ ಬನ್ನಿರೇ
ಹಾಡನ್ನು ಗುನುಗುತ್ತ ಆರತಿ ಬೆಳಗಿರೆ
ಊರಿಗೆ ಬಂದ ಕಷ್ಟವ ಪರಿಹರಿಸು
ಜೀವರ ಜೀವಕೆ ರಕ್ಷಣೆ ಹರಿಸು

ಪಂಚಮಿ ಹಬ್ಬ ಸಡಗರದಿ ಮಾಡೋಣ
ಉಂಡೆ ಬೆಲ್ಲ ಪಾಯಸ ಸವಿಯೋಣ
ತವರಿನ ಮನೆಯ ನೆನೆಯೋಣ
ಗೆಳತಿಯರ ಕೂಡೆ ನಲಿಯೋಣ

- ರತ್ನಾ ಕೆ.ಭಟ್ ತಲಂಜೇರಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...