ಶುಕ್ರವಾರ, ಸೆಪ್ಟೆಂಬರ್ 2, 2022

ಗಣೇಶ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಏಕದಂತ ಮೊದಲ ಪೂಜಿಪೆ
ಕರವ ಮುಗಿದು ನಿನ್ನಯ ಜಪಿಪೆ
ನೀಡು ವರವ ತರುವ ಬಲವ
ವಿಘ್ನ ಅಳಿಸಿ ಕರುಣೆ ತೋರಿಪೆ

ಬೆನಕ ನಿನಗೆ ಮೊದಕರ್ಪಣೆ
ವಿದ್ಯಪ್ರದಾಯಕ ಭಕ್ತಿ ಸಮರ್ಪಣೆ
ಅಗ್ರಗಣ್ಯನೆ ಮನದಿ ನೆಲೆಸುತ
ಹರಿಸು ಎಮ್ಮನು ಗೌರಿಪುತ್ರನೆ

ಚತುರತೆಯದಿ ಪಡೆದೆ ಆತ್ಮಲಿಂಗವ
ಮಾತೆಯ ಭಾಷೆಗೆ ನೀ ಗೆದ್ದೆ ಜಗವ
ನಕ್ಕ ಚಂದ್ರನಿಗೆ ನೀ ಕೊಟ್ಟ ಶಾಪದಿ
ಪ್ರಾಯಶ್ವಿದಲಿ ಕಳೆಯುತಿಹನು ದಿನವ

ಪೂಜಿಸಿಕೊಂಡು ವಿಷ್ಣುವಿಗೆ ಶಂಖವನಿತ್ತೆ
ಕುಬೇರನ ಅಷ್ಟೈಶ್ವರ್ಯದ ಮದವನಳಿಸಿದೆ 
ವ್ಯಾಸರ ಜೊತೆಗೂಡಿ ಮಹಾಕಾವ್ಯ ರಚಿಸುತ 
ಅನಂತ ನಾಮದಿ ವಿಖ್ಯಾತನಾದೆ 

ಬರುವೆ ನೀನು ಗಣೇಶ ಚತುರ್ಥಿಯಂದು
ಎಲ್ಲರ ಮನೆಮನದ ವಿಘ್ನ ತೊಳೆಯಲೆಂದು
ಲೋಕಮಾನ್ಯ ಟಿಳಕರಿಂದ ಒಗ್ಗುಡಿದೆವಂದು
ಒಂದೇ ಮತದಿ ನಿನ್ನ ಪೂಜಿಪೆವು ಇಂದು.

-  ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...