ಗುರುವಾರ, ಅಕ್ಟೋಬರ್ 13, 2022

ಮಂದಾರವೇ ನೀ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಲತೆಗಳಲ್ಲಿ ಕುಸುಮವರಳಿ
ಇವಳ ದಂತಪಂಕ್ತಿಗಳೇ ಬಾನಾಡಿ ಬೆಳ್ಳಕ್ಕಿಸಾಲು 
ನಿಂತಿಹಳು ಚೆಲುವಿ ನಗುಮೊಗವ ಚೆಲ್ಲಿ
ನಿಂತಿಹಳು ಚೆಲುವಿ ನಗುಮೊಗವ ಚೆಲ್ಲಿ

ಕುಡಿಹುಬ್ಬ ಕಾಮನಬಿಲ್ಲು
ಕಣ್ಣೇರಡು ಕಮಲದ ಹೂವು
ನಿಂತಿಹಳು ಚೆಲುವಿ ಹೂವ ಚೆಲ್ಲಿ
ನಿಂತಿಹಳು ಚೆಲುವಿ ಹೂವ ಚೆಲ್ಲಿ

ನಗುಮೊಗದಲಿ ತುಂಬಿದೆ ಒಲವು
ಇವಳ ಸವಿ ಮಾತುಗಳಲ್ಲಿದೆ ಬಲವು
ನಿಂತಿಹಳು ಮನದನ್ನೆ ನಲ್ಲನೆದೆಯ ಕದ್ದು
ಇವಳಿಂದ ಚಿಗುರುತಿದೆ ಮನದಲಿ ಹೂಬಳ್ಳಿ

ಮನದಲಿ ಮನೆಯ ಮಾಡಿ
ಕ್ಷಣ ಕ್ಷಣವೂ ಉಸಿರಲಿ ಉಸಿರಾಗಿ ಬೆರೆತು
ಬರುವ ನೋಡುತ ನಿಂತಿಹಳು ಮಲ್ಲಿ
ನೋಡುತ ನಿಂತಿಹಳು ಮನದ ಚೆಲುವಿ ಮಲ್ಲಿ
- ಶಿವಾ ಮದಭಾಂವಿ, ಗೋಕಾಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...