ಗುರುವಾರ, ಅಕ್ಟೋಬರ್ 13, 2022

ಸೌಂದರ್ಯ ಲಹರಿ (ಕವಿತೆ) - ಶಾಂತಾರಾಮ ಶಿರಸಿ.

ಮುದ್ದು ಕುವರಿ,
ಪೆದ್ದು ಮರಿ,
ಸೌಂದರ್ಯ ಸಿರಿ,
ನಿನ್ನಂದವು ರಂಗಿನ ನವಿಲು ಗರಿ...

ಸೌಂದರ್ಯವೆಲ್ಲಾ ನಿನ್ನಲ್ಲೇ ಸೃಷ್ಟಿಸಿ,
ನಿನ್ನ ನೋಡಲು ಬಹಳ ಖುಸಿ(ಷಿ),
ಸೀರೆಯುಟ್ಟು-ಮಲ್ಲಿಗೆಯ ಮುಡಿದು-ಹಣೆಯ ಮೇಲೆ ಬೊಟ್ಟಿಟ್ಟು ಶೃಂಗರಿಸಿ,
ಪದೇ-ಪದೇ ಅದೇ ಮುಂಗುರುಳ ಸರಿಸಿ,
ಕೆಂದುಟಿಯ ಕೆಂಪನೆಯ ತುಟಿಯಿಂದ ನಗುವ ಹೊರಸೂಸಿ,
ಹಾರುವ ಹಕ್ಕಿಗಳಿಗೆಲ್ಲಾ ಹಾಗೇ ಕೈಬೀಸಿ,
ನೋಡುವ ಹುಡುಗರನೆಲ್ಲಾ ಮೋಹಿಸಿ...

ಮುನಿಸಿರದ ಮುತ್ತಿನಂಥ ಮಾತುಗಳು,
ಕೈಯಾರೆ ತಿನಿಸುವ ತಿನಿಸುಗಳು,
ಯಾರಿಗೂ ಬೇಧ-ಭಾವ ತೋರದೇ,
ಎಲ್ಲರೂ ನನ್ನಂತೇ ಎಂದೇ,
ನಿನ್ನನ್ನು ಮರೆಯದ ಈ ಹೃದಯ ಉಸಿರಾಡುತಿದೆ...

 - ಶಾಂತಾರಾಮ ಶಿರಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...