ಭಾರತದ ಬೆಳವಣಿಗೆಯಲ್ಲಿ ಕನ್ನಡಿಗರ ಪಾತ್ರವೇನೆಂದರೆ ಇದೊಂದು ವ್ಯಾಪಕವಾದ ವಿಷಯವೇ ನಿಜ. ಕನ್ನಡಿಗರು ಇಂದೇನಾಗಿದ್ದಾರೆ ಎಂದರೆ ನಾವು ಎಷ್ಟು ದೊಡ್ಡ ರಾಜ್ಯಗಳನ್ನು ನಿರ್ಮಿಸಿದ್ದೆವು ಎಲ್ಲಿಯವರೆಗೂ ನಮ್ಮ ಗಡಿ ಸೀಮೆಗಳು ಇದ್ದವು ಎನ್ನುವುದು ಈಗ ನೆನಪೇಇಲ್ಲದಂತಾಗಿಹೋಗಿದೆ.
ನಮಗೆಲ್ಲ ತಿಳಿದಿರಬಹುದು ನಮ್ಮ ಕನ್ನಡದ ಪ್ರಸಿದ್ಧ ರಾಜಮನೆತನಗಳಾದ ರಾಷ್ಟ್ರಕೂಟರ ಬಲ, ಚಾಲುಕ್ಯರ ಸೈನ್ಯ ಎನ್ನುವುದು ಉತ್ತರ ಭಾಗದ ಗಡಿಗಳ ತನಕ ವ್ಯಾಪಕಗೊಂಡಿದ್ದವು. ನಮ್ಮ ಕರ್ನಾಟಕದ ಬಲ ಹೇಗಿತ್ತು ಎಂದರೆ ಬೇರೆ ರಾಜ್ಯಗಳು ಯುದ್ಧ ಮಾಡಬೇಕಾದ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಸೈನ್ಯವನ್ನು ಕಳುಹಿಸುವಷ್ಟು ನಮ್ಮಲ್ಲಿ ಸೈನ್ಯದ ಶಕ್ತಿ ಬೆಳದಿತ್ತು.
ಇನ್ನು ಪರಾಕ್ರಮದ ವಿಷಯದಲ್ಲೂ ಸಹ ನಮ್ಮ ಹೆಮ್ಮೆಯ ಕನ್ನಡಿಗರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ನಮ್ಮ ಸುಪ್ರಸಿದ್ಧ ರಾಜ ಮನೆತನಗಳಾದ ಚಾಲುಕ್ಯರು, ರಾಷ್ಟ್ರಕೂಟರು ತದನಂತರ ಬಂದಂತಹ ವಿಜಯನಗರ ಸಾಮ್ರಾಜ್ಯ ಇವುಗಳೆ ಕನ್ನಡಿಗರ ಪರಾಕ್ರಮಕ್ಕೆ ಬಹುದೊಡ್ಡ ಉದಾಹರಣೆಗಳೆನ್ನಬಹುದಾಗಿದೆ. ಏಕೆಂದರೆ ವಿಜಯನಗರ ಸಾಮ್ರಾಜ್ಯ ಬಂಗಾಳದ ತನಕ ವ್ಯಾಪಕಗೊಂಡ ಕೃಷ್ಣದೇವರಾಯರು ಒರಿಸ್ಸಾದ ಗಜಪತಿಯನ್ನು ಸೋಲಿಸಿದ ಸಂದರ್ಭವನ್ನು ಸಹ ನಾವು ಕಾಣಬಹುದಾಗಿದೆ. ಕೇವಲ ಯುದ್ಧ ಮಾಡಿ ಸೋಲಿಸಿ ಹಿಂತಿರುಗುವುದಷ್ಟೇ ಅಲ್ಲ, ಬದಲಾಗಿ ಅಲ್ಲಿಯೇ ಸಾಮ್ರಾಜ್ಯವನ್ನು ಸಹ ಸ್ಥಾಪನೆ ಮಾಡಿದ್ದಾರೆ ಕನ್ನಡಿಗರು ಎನ್ನುವುದು ಹೆಮ್ಮೆಯ ಸಂಗತಿ.
ಉದಾಹರಣೆಯೆಂದರೆ, ಸುಶ್ಮಿತ ಸೇನ್, ಸೇನ್ ಎಂಬುದು ಬಂಗಾಳಿಯ ಹೆಸರಾದರೂ ಸೇನ ಮನೆತನ ಮೂಲಕ ಕನ್ನಡದ್ದೇ. ಸೇನರು ಬಂಗಾಳದಲ್ಲಿ ನೆಲೆಸಿದ್ದರು, ಆದರೆ ಕನ್ನಡದ ಮೂಲ ರಾಜಮನೆತನದವರೇ. ನೇಪಾಳದಲ್ಲಿ ಇದ್ದಂತಹ ಕನ್ನಡದ ರಾಜಮನೆತನದ ಬಗ್ಗೆ ಲೇಖಕರಾದ ಚಿದಾನಂದ ಮೂರ್ತಿಯವರು ಬರೆದಿದ್ದಾರೆ.
ಇನ್ನು ನೇಪಾಳದಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ ಇಂದಿಗೂ ಸಹ ಅರ್ಚಕರು ನಮ್ಮ ಕನ್ನಡ ನಡೆದವರೆ.
ನಮಗೆ ತಿಳಿದಿರಬಹುದು ಕನ್ನಡಕ್ಕೆ ಹೀಗೊಂದು ಬೃಹತ್ ಭಾರತದನಂಟು ಹೇಗಿತ್ತೇನ್ನುವುದನ್ನು.
ಇನ್ನು ನಮ್ಮ ಸಾಹಿತ್ಯ, ಸಂಸ್ಕೃತಿ, ಹಾಗೂ ಸಂಗೀತದ ಕ್ಷೇತ್ರಕ್ಕೆ ನಾವು ಬರುವುದಾದರೆ ಕರ್ನಾಟಕದ ಗೋಪಾಲ ನಾಯಕರು ಹಿಂದುಸ್ತಾನಿ ಸಂಗೀತದ ಜನಕ, ಪ್ರಸ್ತುತ ನಾವೇನು ಹಿಂದುಸ್ತಾನಿ ಜನಕ ಎನ್ನುತ್ತೇವೆ, ತದನಂತರ ಅವರು ಅದನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಅನೇಕ ವಿದ್ವಾಂಸರು ತಮ್ಮ ಬರವಣಿಗೆಯಲ್ಲಿ ಹೇಳಿಕೊಂಡಿದ್ದಾರೆ.
ಇಂದು ಹಿಂದುಸ್ತಾನಿ ಸಂಗೀತ ಎಂದು ತಕ್ಷಣ ಬೇರಲ್ಲೂ ಇರುವುದು ನಮಗೆ ತಿಳಿದರು ಅದಕ್ಕೆ ಮೂಲ ಕಾರಣ ಆತ ಕನ್ನಡದಲ್ಲಿ ಬರೆದಂತಹ ಸಂಗೀತ ಗ್ರಂಥಗಳೆ.
ಇನ್ನು ಕೃಷ್ಣದೇವರಾಯರ ಕಾಲದಲ್ಲಿ ಪಿಳ್ಳಾರಿ ಗೀತೆಗಳನ್ನು ಮಾಡಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಮಾಯ ಮಾಡುವ ಗೌಡ ಎಂಬ ರಾಗವನ್ನು ಮಾಡಿ ಹಾಗೂ ಇದೊಂದು ಪ್ರಾಥಮಿಕ ರಾಗವನ್ನಾಗಿ ಮಾಡಿ ಇದರ ಮುಖಾಂತರ ಎಲ್ಲಾ ರಾಗಗಳನ್ನು ತೆಗೆದುಕೊಂಡು ನಡೆಸುವಂತೆ ಮಾಡಿ ಮಕ್ಕಳಿಗೆ ಅದನ್ನು ಸುಲಭವಾಗಿ ಕಲಿಸಿದರು. ಆ ಕಾಲದಲ್ಲಿ ಸೃಷ್ಟಿ ಆದಂತಹ ಸಂಗೀತ ಅಂದರೆ ವಿದ್ಯಾರಣ್ಯರ ಹಾಗೂ ಪುರಂದರ ದಾಸರು ಪುನರ್ಜೀವವನ್ನು ಕೊಟ್ಟಂತಹ ಸಂಗೀತವನ್ನು ಕರ್ನಾಟಕ ಸಂಗೀತ ಎಂದು ಹೆಸರನ್ನು ಕೊಟ್ಟರು. ಅದನ್ನು ನಾವಿಂದು ಮಲಯಾಳಂ, ತೆಲುಗು, ತಮಿಳ್, ಮದ್ರಾಸ್, ಯಾವುದೇ ಭಾಷೆಯಲ್ಲಿ ಹಾಡಿದರೂ ಅದನ್ನು ಕರ್ನಾಟಕ ಸಂಗೀತ ಎಂದೇ ಕರೆಯುತ್ತಾರೆ. ಅಂತಹ ದೊಡ್ಡ ಕರ್ನಾಟಕ ಸಂಗೀತ ಇಂದು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಹಾಕಿ ಜೈಪುರ್ ಸಂಗೀತ,ಮರಾಠಿ ಸಂಗೀತ, ಕಾಶ್ಮೀರಿ ಸಂಗೀತವೆಂದು ಎಲ್ಲೂ ಇಲ್ಲ ಆಗೊಮ್ಮೆ ಇದ್ದರೂ ಸಹ ಅದು ಪ್ರಾದೇಶಿಕವಾಗಿ ಬಿಡುತ್ತದೆ.
ನಮ್ಮ ಭಾರತ ದೇಶದಲ್ಲಿ ಯಾವುದಾದರೂ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತದ ಹೆಸರಿನಲ್ಲಿ ಕೊಡುಗೆಯನ್ನು ಕೊಟ್ಟಿದ್ದರೆ ಅದು ಕರ್ನಾಟಕದ ಸಂಗೀತವೇ. ಯಾಕೆಂದರೆ ಇದು ಅಷ್ಟು ಶಾಸ್ತ್ರಿನಿಬದ್ಧವಾಗಿ, ಪ್ರೌಢವಾಗಿ ರಚಿತವಾದ ಸಂಗೀತ. ಈ ರೀತಿ ನಮ್ಮ ಕನ್ನಡಿಗರು ಸಂಗೀತಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ.
ಇನ್ನು ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ದೇವಸ್ಥಾನಗಳು, ಕೆತ್ತನೆಗಳು ಇಂದಿಗೂ ಕೂಡ ಬೇರೆ ಬೇರೆಯ ಭಾಗದ ಜನರ ಮೇಲೆ ತೀರ ಪ್ರಭಾವವನ್ನು ಬೀರಿತ್ತು, ಬೀರುತ್ತದೆ. ಗುಜರಾತ್ನಲ್ಲಿ ಆಳಿದಂತಹ ರಾಜ ಮನೆತನಗಳು, ಮಧ್ಯ ಭಾರತದಲ್ಲಿ ಆಳಿದಂತಹ ರಾಜ ಮನೆತನಗಳ ಮೇಲೆ ನಮ್ಮ ಚಾಲುಕ್ಯರ ಹಾಗೂ ರಾಷ್ಟ್ರಕೂಟರ ಪ್ರಭಾವ ತೀರ ಬೀರಿದೆ.
ಇನ್ನು ಗಂಗರು, ಗಂಗರಲ್ಲಿ ಎರಡು ಅಂದರೆ ಪಶ್ಚಿಮ ಗಂಗಾರು ಹಾಗೂ ಪೂರ್ವದ ಗಂಗರು ಎಂದು ಬರುತ್ತಾರೆ. ಸಾಮಾನ್ಯವಾಗಿ ಹೆಚ್ಚು ಮಾತನಾಡುವುದು, ಓದುವುದಿಲ್ಲ ಪಶ್ಚಿಮ ಗಂಗರು ಅಂದರೆ ಚಾವುಂಡರಾಯ, ಶ್ರವಣಬೆಳಗೋಳದ ಗೊಮ್ಮಟೇಶ್ವರ ವಿಗ್ರಹ ಮುಂತಾದವುಗಳ ಬಗ್ಗೆ.
ಇನ್ನು ಪೂರ್ವದ ಗಂಗರು ಅಂದರೆ ಕಳಿಂಗ ಸಾಮ್ರಾಜ್ಯ ಒರಿಸ್ಸಾದ ಉತ್ಕಲದಲ್ಲಿ ಆಳಿದ ಮೂಲವ್ಯಾಕ್ತಿಗಳೇ ನಮ್ಮ ಕರ್ನಾಟಕದವರು.
ಹೀಗೆ ನಮ್ಮ ಕರ್ನಾಟಕದ ಪ್ರಭಾವ ಎಲ್ಲಾ ಕಡೆಯೂ ನಮ್ಮ ಹೆಮ್ಮೆಯ ರಾಜಮನೆತನಗಳ ಕಾಲದಲ್ಲಿ ಬೀರಿತ್ತು.
ಇನ್ನು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಅವರು ಪುನಾದಲ್ಲೂ ಕೆಲಸ ಮಾಡಿದ್ದರು, ಹೈದರಾಬಾದ್ನಲ್ಲಿ ಕೋಸಿ ನದಿ ಪ್ರವಾಹದ ಸಂದರ್ಭದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. ಹೀಗೆ ದೊಡ್ಡ ಮಟ್ಟದಲ್ಲಿ ನಮ್ಮ ಕರ್ನಾಟಕದ ಸರ್ ಎಂ. ವಿಶ್ವೇಶ್ವರಯ್ಯ ನವರು ಎಲ್ಲೆಡೆ ತಮ್ಮ ಕೆಲಸವನ್ನು ಮಾಡಿದ್ದರು.
ಇನ್ನು ಚಿತ್ರೀಕರಣದ ಕ್ಷೇತ್ರದಲ್ಲೂ ಸಹ ಅಂದರೆ ಪೌರಾಣಿಕ ಸಿನಿಮಾಗಳನ್ನು ನಾವು ಕಂಡರೆ ಡಾ.ರಾಜಕುಮಾರ್ ರೀತಿ ಅಭಿನಯ ಯಾರು ಮಾಡಿಲ್ಲ. ಹಿಂದಿಯಲ್ಲಿ ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬೇರೆಯವರು ಮಾಡಿದ್ದರು ಅದನ್ನು ಮಾಡಿ ಸೋತಿರುವುದಿದೆ. ಯಾಕೆಂದರೆ ಸಾಮಾಜಿಕ ಪಾತ್ರವನ್ನು ಮಾಡುವ ನಟ, ನಟಿಯರು, ಪೌರಾಣಿಕ ಪಾತ್ರವನ್ನು ಸಹ ಮಾಡಿ ಜಯಿಸಿಕೊಳ್ಳುವುದು, ಅದರಲ್ಲೂ ಪ್ರೇಕ್ಷಕರು ಅದನ್ನು ಒಪ್ಪುವುದು, ತುಂಬಾ ಕಷ್ಟ. ಅದನ್ನು ಪ್ರೇಕ್ಷಕರ ದೃಷ್ಟಿಯಲ್ಲೂ ಸಹ ಗೆದ್ದರೆ, ಆಗ ಮಾತ್ರವೇ ಹೆಮ್ಮೆ. ಇದಕ್ಕೆ ನಮ್ಮ ಕನ್ನಡ ಸಿನಿಮಾಗಳೇ ಮಾದರಿ.
ಹೀಗೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಭಾರತಕ್ಕೆ ಹೆಮ್ಮೆಯ ಕೊಡುಗೆಯನ್ನು ಕೊಟ್ಟಿದೆ ಎನ್ನಬಹುದು.
ಇನ್ನು ಇತ್ತೀಚಿನ ಕಾಲದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಒಂದು ಮಾದರಿಯನ್ನು ನೀಡಿತು. ಎಷ್ಟೋ ದೊಡ್ಡ ದೊಡ್ಡ ವಿಜ್ಞಾನಿಗಳು ಅದರ ಮುಖಾಂತರ ಹೊರಬಂದರು. ಕರ್ನಾಟಕದ ವಿಜ್ಞಾನಿಗಳಿರಬಹುದು, ಸಾಹಿತಿಗಳಿರಬಹುದು, ಕಲಾವಿದರಿರಬಹುದು, ಬಹಳ ದೊಡ್ಡ ಮಟ್ಟದಲ್ಲಿ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲೆಡೆ ಹರಡಿದ್ದಾರೆ. ಯಾಕೆ ಕನ್ನಡಿಗರು ಇಷ್ಟೊಂದು ವ್ಯಾಪಕವಾಗಿ ಹರಡಿದ್ದಾರೆ, ಇಷ್ಟರಮಟ್ಟಿಗೆ ಹರಡಿದ್ದರೂ ಈ ರೀತಿಯಾಗಿ ಮೇಲೆ ಬೆಳೆಯುವುದಕ್ಕೆ ಕನ್ನಡಿಗರಲ್ಲಿ ಇರುವಂತಹ ಎಲ್ಲವನ್ನು ಒಳಗೊಳ್ಳುವ ಮತ್ತು ಎಲ್ಲವನ್ನು ಬೆಳೆಸುವ, ಜೊತೆಯಲ್ಲಿ ತಾನು ಬೆಳೆಯುವ ಹಾಗೂ ಬೇರೆಯವರನ್ನು ಬೆಳೆಸುವ ಸಹೃದಯ ಮನೋಭಾವ ಕನ್ನಡಿಗನದು. ಹೀಗೆ ಬೇಂದ್ರೆಯವರು ಹೇಳಿರುವಂತೆ "ಜಗದೇಳಿಗೆ ಯಾಗುವುದೇ ಅದು ಕರ್ನಾಟಕದಿಂದೇ" ಅವರ ವಿಶ್ವಾಸ ಕನ್ನಡಿಗರಿಂದ ಪ್ರಪಂಚಕ್ಕೆ ಒಳ್ಳೆಯದಾಗುವುದು. ಒಳ್ಳೆಯದಾಗುವುದಾದರೆ, ಅದಕ್ಕೆ ನಮ್ಮ ಕನ್ನಡಿಗರದ್ದು ಒಂದು ಕೊಡುಗೆ ಇದ್ದೇ ಇದೆ..
- ಬ್ರಿಜೇಶ್ ಕುಮಾರ್. ಬಿ. ಟಿ.
ದ್ವಿತೀಯ ಪಿ ಯು ವಿದ್ಯಾರ್ಥಿ.
ಚಿತ್ರದುರ್ಗ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ