ಶನಿವಾರ, ಡಿಸೆಂಬರ್ 10, 2022

ಪ್ರಕಟಣೆ : ಕವನ ಸಂಕಲನಕ್ಕೆ ಕವನಗಳ ಆಹ್ವಾನ.

ವಿಚಾರ ಮಂಟಪ ಸಾಹಿತ್ಯ ಬಳಗವು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ಕವಿಗಳ ಕವಿತೆಗಳನ್ನು ಸಂಕಲಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಆಸಕ್ತ ಕವಿಗಳು ಮುಂದೆ ನೀಡಲಾಗಿರುವ ಸೂಚನೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಕವಿತೆಗಳನ್ನು ಕಳುಹಿಸಬಹುದು.
• ಕವನಗಳನ್ನು ಸಮಕಾಲೀನ ಸಮಸ್ಯೆಗಳ, ಸಾಮಾಜಿಕ ಪಿಡುಗುಗಳ ಕುರಿತಾಗಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ನೀಡುವ ಆಶಯವನ್ನಿಟ್ಟುಕೊಂಡು ರಚಿಸಿರಬೇಕು. ಮತ್ತು ಯಾವುದೇ ಪುಸ್ತಕ, ಪತ್ರಿಕೆಗಳಲ್ಲಿ ಪ್ರಕಟಿಸಿರಬಾರದು. 
• ಸಂಪಾದಕ ಮಂಡಳಿಯವರು ಆಯ್ಕೆ ಮಾಡಿದ ಕವನಗಳನ್ನು ಮಾತ್ರವೇ ಪ್ರಕಟಣೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ೩ ಅತ್ಯುತ್ತಮ ಕವನಗಳಿಗೆ ಮತ್ತು ಒಂದು ಉತ್ತಮ ಶೀರ್ಷಿಕೆಗೆ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನವಿರುತ್ತದೆ.
• ಕವನವು ೨೦-೨೫ ಸಾಲುಗಳ ಮಿತಿಯಲ್ಲಿಯೇ ಇರಬೇಕು. ಒಬ್ಬ ಕವಿ ೨ ಕವಿತೆಗಳನ್ನು ಕಳುಹಿಸಬಹುದು. ಪ್ರಾರಂಭದಲ್ಲಿ ವಿಚಾರ ಮಂಟಪ ಕವನ ಸಂಕಲನದಲ್ಲಿ ಪ್ರಕಟಿಸಲು ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಕವನದ ಶೀರ್ಷಿಕೆ, ಬರಹಗಾರರ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ಕವಿಯ ಕಿರು ಪರಿಚಯ ಹಾಗೂ ತಪ್ಪಿಲ್ಲದೇ (ಕಡ್ಡಾಯವಾಗಿ ಯುನಿಕೋಡ್ ನಲ್ಲಿ) ಟೈಪಿಸಿದ ನಿಮ್ಮ ಕವನಗಳನ್ನು ೮೨೧೭೭೪೪೮೮೬ ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು.
• ಕವನಗಳನ್ನು ದಿನಾಂಕ ೩೦.೦೧.೨೦೨೩ ರ ಒಳಗಾಗಿ ನಮಗೆ ಕಳುಹಿಸುವುದು.
• ಕವನ ಸಂಕಲನ ಪ್ರಕಟಣೆಗೆ ಬೇಕಾಗುವ ಹಣವನ್ನು ಬರಹಗಾರರಿಂದಲೇ ಸಂಗ್ರಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ವರುಣ್‌ರಾಜ್ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ
೯೪೪೮೨೪೧೪೫೦ (ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...