ವಿಚಾರ ಮಂಟಪ ಸಾಹಿತ್ಯ ಬಳಗವು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ಕವಿಗಳ ಕವಿತೆಗಳನ್ನು ಸಂಕಲಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಆಸಕ್ತ ಕವಿಗಳು ಮುಂದೆ ನೀಡಲಾಗಿರುವ ಸೂಚನೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಕವಿತೆಗಳನ್ನು ಕಳುಹಿಸಬಹುದು.
• ಕವನಗಳನ್ನು ಸಮಕಾಲೀನ ಸಮಸ್ಯೆಗಳ, ಸಾಮಾಜಿಕ ಪಿಡುಗುಗಳ ಕುರಿತಾಗಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ನೀಡುವ ಆಶಯವನ್ನಿಟ್ಟುಕೊಂಡು ರಚಿಸಿರಬೇಕು. ಮತ್ತು ಯಾವುದೇ ಪುಸ್ತಕ, ಪತ್ರಿಕೆಗಳಲ್ಲಿ ಪ್ರಕಟಿಸಿರಬಾರದು.
• ಸಂಪಾದಕ ಮಂಡಳಿಯವರು ಆಯ್ಕೆ ಮಾಡಿದ ಕವನಗಳನ್ನು ಮಾತ್ರವೇ ಪ್ರಕಟಣೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ೩ ಅತ್ಯುತ್ತಮ ಕವನಗಳಿಗೆ ಮತ್ತು ಒಂದು ಉತ್ತಮ ಶೀರ್ಷಿಕೆಗೆ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನವಿರುತ್ತದೆ.
• ಕವನವು ೨೦-೨೫ ಸಾಲುಗಳ ಮಿತಿಯಲ್ಲಿಯೇ ಇರಬೇಕು. ಒಬ್ಬ ಕವಿ ೨ ಕವಿತೆಗಳನ್ನು ಕಳುಹಿಸಬಹುದು. ಪ್ರಾರಂಭದಲ್ಲಿ ವಿಚಾರ ಮಂಟಪ ಕವನ ಸಂಕಲನದಲ್ಲಿ ಪ್ರಕಟಿಸಲು ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಕವನದ ಶೀರ್ಷಿಕೆ, ಬರಹಗಾರರ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ಕವಿಯ ಕಿರು ಪರಿಚಯ ಹಾಗೂ ತಪ್ಪಿಲ್ಲದೇ (ಕಡ್ಡಾಯವಾಗಿ ಯುನಿಕೋಡ್ ನಲ್ಲಿ) ಟೈಪಿಸಿದ ನಿಮ್ಮ ಕವನಗಳನ್ನು ೮೨೧೭೭೪೪೮೮೬ ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು.
• ಕವನಗಳನ್ನು ದಿನಾಂಕ ೩೦.೦೧.೨೦೨೩ ರ ಒಳಗಾಗಿ ನಮಗೆ ಕಳುಹಿಸುವುದು.
• ಕವನ ಸಂಕಲನ ಪ್ರಕಟಣೆಗೆ ಬೇಕಾಗುವ ಹಣವನ್ನು ಬರಹಗಾರರಿಂದಲೇ ಸಂಗ್ರಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ವರುಣ್ರಾಜ್ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ
೯೪೪೮೨೪೧೪೫೦ (ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ