ಮಂಗಳವಾರ, ಡಿಸೆಂಬರ್ 13, 2022

ನಂಟು (ಕವಿತೆ) - ಕಾರ್ತಿಕಕುಮಾರ್, ಬೀದರ್.

ಎಂಟು ತುಂಬುವ
ಮೊದಲೇ ಕಳಚಿತು
ಅಪ್ಪನ ನಂಟು
ಅಲ್ಲಿಗೆ ಅರ್ಥವಾಗಿತ್ತು
ಅವನ ನನ್ನ ಋಣ ತೀರಿತೆಂದು

ಹರಸಿ ಹೋರಟವ
ಕನಸಿನಲ್ಲೂ ನನ್ನ ಕಾಡುವ
ಎಚ್ಚರವಾದಗಲೆಲ್ಲ ಮತ್ತೆ
ಮರಳಿ ಬರುವನೇನೋ
ಅನ್ನೋವಷ್ಟು ನಾ ಭಾವುಕ

ಇಂದಿಗೂ ನೀಲಿ ಬಾನಲಿ ಮಿನುಗುತಿಹನು
ಅಲ್ಲಿಂದಲೇ ನನ್ನ ಹರಸುತಿಹನು.

- ಕಾರ್ತಿಕಕುಮಾರ್, ಬೀದರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...