ಮಂಗಳವಾರ, ಡಿಸೆಂಬರ್ 13, 2022

ನಂಟು (ಕವಿತೆ) - ಕಾರ್ತಿಕಕುಮಾರ್, ಬೀದರ್.

ಎಂಟು ತುಂಬುವ
ಮೊದಲೇ ಕಳಚಿತು
ಅಪ್ಪನ ನಂಟು
ಅಲ್ಲಿಗೆ ಅರ್ಥವಾಗಿತ್ತು
ಅವನ ನನ್ನ ಋಣ ತೀರಿತೆಂದು

ಹರಸಿ ಹೋರಟವ
ಕನಸಿನಲ್ಲೂ ನನ್ನ ಕಾಡುವ
ಎಚ್ಚರವಾದಗಲೆಲ್ಲ ಮತ್ತೆ
ಮರಳಿ ಬರುವನೇನೋ
ಅನ್ನೋವಷ್ಟು ನಾ ಭಾವುಕ

ಇಂದಿಗೂ ನೀಲಿ ಬಾನಲಿ ಮಿನುಗುತಿಹನು
ಅಲ್ಲಿಂದಲೇ ನನ್ನ ಹರಸುತಿಹನು.

- ಕಾರ್ತಿಕಕುಮಾರ್, ಬೀದರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...