ಬುಧವಾರ, ಡಿಸೆಂಬರ್ 21, 2022

ಹೇಮಾವತಿ ನದಿ ಹರಿದಾಳೋ (ಕವನ) - ಗೊರೂರು ಅನಂತರಾಜು, ಹಾಸನ.

ಹೊಸ ಬೆಳಕು ಮೂಡ್ಶಾವೋ
ಕತ್ತಲು ಕರಗ್ಯಾವೋ
ಅಣೆಕಟ್ಟೆ ಗೊರೂರಲ್ಲಿ ಕಟ್ಯಾರೋ
ಹೇಮಾವತಿ ನದಿ ಹರಿದಾಳೋ

ಎಡದಂಡೆ ನಾಲೆಯಿಂದ
ತುಮಕೂರಿಗೆ ಹರಿದಾಳೋ
ರೈತರು ನೀರು ಪಡೆದಾರೋ
ನಾಲೆಯ ನೀರು ಪಡೆದಂತ ರೈತರು
ಹೊಲಕ್ಕೆಲ್ಲಾ ಬೀಜ ಬಿತ್ತಾರೋ
ಹೇಮಾವತಿ ನದಿ ಹರಿದಾಳೋ

ಬಲದಂಡೆ ನಾಲೆಯಿಂದ
ಹೊಳೆನರಸೀಪುರಕ್ಕೆ ಹರಿದಾಳೋ
ಭತ್ತ ಕಬ್ಬು ಬೆಳೆದ್ಯಾರೋ
ರೈತರ ಬಾಳು ಬೆಳಗ್ಯಾಳೋ
ಹೇಮಾವತಿ ನದಿ ಹರಿದಾಳೋ

ಬಲಮೇಲ್ದಂಡೆ ನಾಲೆಯಿಂದ
ಹೇಮಾವತಿ ಹರಿದಂತೆ
ಕೆರೆಕಟ್ಟೆ ತುಂಬಿ ತುಳಕ್ಯಾವೋ
ನಮ್ಮ ಈ ಬದುಕನ್ನು
ಹಸನಾಗಿ ಮಾಡಿದ
ಹೇಮಾವತಮ್ಮಗೆ ಶಿರಬಾಗಿ
ಬಾಗಿನ ಪೂಜೆ ಮಾಡೇವೋ
ಹೇಮಾವತಿ ನದಿ ಹರಿದಾಳೋ

       
- ಗೊರೂರು ಅನಂತರಾಜು
ಹಾಸನ
9449462879

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...