ಬುಧವಾರ, ಡಿಸೆಂಬರ್ 21, 2022

ದೂರ ತೀರದ ಯಾನ (ಕವಿತೆ) - ಸುಭಾಷ್ ಸವಣೂರು.

ಮನದಂತರಾಳದಲಿ ಗರಿಗೆದರುತಿದೆ 
ನೊರೆಂಟು ಬಣ್ಣ ಬಣ್ಣದ ಚಿತ್ತಾರಗಳು
ಹೃದಯದಲಿ ಹಾಗೆ ಗೂಡು ಕಟ್ಟಿದೆ
ಪ್ರೀತಿ ಪ್ರೇಮಗಳ ಮಧುರ ಬಾಂಧವ್ಯವು

ಕಂಡು ಕಾಣದೆ ಸುಮ್ಮನೆ
ಮರೆಯಾದ ಸವಿಗನಸುಗಳು
ಹಾಗೆ ಹುದುಗಿ ಹೋಗಿವೆ
ಅಂತರಂಗದ  ಭಾವನೆಗಳಲಿ

ಎಳೆ ಎಳೆಯಾಗಿ ಹರಿದು ಬರುತಿವೆ
ನೆನಪಿನ ಒಡಲಾಳದಿಂದ
ಅಂದು ಮೌನದಲ್ಲೇ ಅಳಿದು ಹೋದ
ಆ ಸುಂದರ ಕಾವ್ಯಗಳು

ಸಾಗುತಿದೆ  ಜೀವನದ ಪಯಣವು
ಸಾಗರದೀ ತೇಲುವ ನಾವೆಯ ಹಾಗೆ
ನಾವಿಕ ನೀನು ಪಯಣಿಗ ನಾನು
ಅರಿಯೆ ನಾನಿಂದು ಎಂದು ಸೇರುವೆನೆಂದು
 ಆ  ದೂರ ತೀರದ ಯಾನವ .....!!!!  

  - ಸುಭಾಷ್ ಸವಣೂರು.

         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...