ಸೋಮವಾರ, ಜನವರಿ 30, 2023

ಪ್ರಣಾಳಿಕೆ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಚುನಾವಣೆಯಲ್ಲಿ ಕಾಣುವ
ಪ್ರಣಾಳಿಕೆಯ ಸುರಿಮಳೆ
ಬಡಜನರ ಮರುಳಾಗಿಸಲು
ಇವರದೇ ಕಹಳೆ
ಯಾರು ಗೆದ್ದರೇನು 
ಬಿಡದು ದಿನದ ರಗಳೆ
ಗಾಳಕೆ ಬಿದ್ದನಂತರ 
ಪರಿತಪಿಸಬೇಡಿ ಪ್ರಜೆಗಳೆ

ಭ್ರಷ್ಟಾಚಾರಕೆ ಬೇಡಿ 
ಹಾಕುವವರಾರಿಲ್ಲ
ದೌರ್ಜನ್ಯ ಎಸೆದ ಆರೋಪಿ 
ಶಿಕ್ಷೆಗೆ  ಒಳಪಟ್ಟಿಲ್ಲ 
ಚುನಾವಣೆಯ ಪ್ರಣಾಳಿಕೆ 
ಯಾರ ಕೈ ಸೇರುವುದಿಲ್ಲ
ದುಡ್ಡಿನ ಆಸೆಗೆ ಜನ 
ಮುಗಿಬೀಳುವರಲ್ಲ

ಪ್ರಣಾಳಿಕೆಗೆ ಪ್ರಜೆಗಳದೇ 
ಹಣದ ದುರ್ಬಳಕೆ 
ಯಾರಿಗೆ ಬೇಕು 
ಇಂತಹ ಹೊಗಳಿಕೆ
ಮೈ ಮುರಿದು ದುಡಿದರೆ 
ಅದುವೇ ಜೀವನಕೆ
ಎರಡೊತ್ತಿನ ಹಸಿವಿನ 
ಚೀಲ ತುಂಬುವುದಕೆ

ತಿಳಿದವರ ಛತ್ರ
ಕಾಯಕವೇ ಕೈಲಾಸ 
ಬಿಡಬೇಡಿ ಧೃಡ 
ಸಂಕಲ್ಪದ ಮಂತ್ರ 
ಮರುಳಾಗಲು ಹೂಡುವರು 
ಹೊಸ ಹೊಸ ತಂತ್ರ
ನಿಮ್ಮ ಹಕ್ಕಿನ ಮತಕೆ 
ತೆರೆದಿರಲಿ ನಿಮ್ಮಯ ನೇತ್ರ

ಪ್ರಣಾಳಿಕೆ ಹೊರಡಿಸಲು
ಯಾರಪ್ಪನ ಗಂಟು
ಬೂಟಾಟಿಕೆಯ ಮಾತಲಿ
ತೋರಿಸುವ ನಂಟು
ಮತದಾನದ ಮರುದಿನವೇ
ಅಭ್ಯರ್ಥಿಗಳು ಕಟ್ಟುವರು ಗಂಟು
ಮರು ಮತದಾನದಕೆ
ಇವರ ಪಾದಾರ್ಪಣ ನೂರಕ್ಕೆ
ನೂರು ಪರ್ಸೆಂಟ್ 
- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...