ಸೋಮವಾರ, ಜನವರಿ 30, 2023

ನಂಬಿಕೆಯ ನೆರಳು (ಕವನ) - ಸುಭಾಷ್, ಸವಣೂರ.

ನೀನಾಗು ಬಾಯಿಲ್ಲಿ 
ನನ್ನೊಳಗಿನ ನೋವಲ್ಲಿ
ನಂಬಿಕೆಯ ನೆರಳು

ನಾ ಬರೆದ ಕವಿತೆಗೆ
ಭಾವ ತುಂಬಿ ಹಾಡಿಗೆ
ನೀನಾಗು ಸವಿಗೊರಳು

ಮುಂಜಾನೆ ಮಂಜಿನಲಿ
ನಂಜೆಂಬುದು ಏನಿಲ್ಲ
ನೀನಾಗು ಹೊಳೆವ ಕಿರಣ

ಅರಳುವ ಸುಮದಿ
ಮಕರಂದವಾಗಿ ಬೆರೆತು
ದುಂಬಿಗಾಗು ನೀ ಪ್ರೇರಣೆ 

ನಾಳೆಗಳು ನರಳದಂತೆ
ಬೆರಳು ಹಿಡಿದು ನಡೆಸು
ನಿನ್ನೊಲವಿಗೆ ಬೆಲೆಯಿದೆ

ಅಂತರಂಗದ ಮಿಡಿತ
ಅರಿತಿರುವೆ ನೀ ಖಚಿತ
ನಿನಗೆ  ಆ ಕಲೆಯಿದೆ

ಬೇಸರದ ಬರದ ಛಾಯೆ
ಆವರಿಸಿರಲು ಮನದಲ್ಲಿ
ನೀನಾಗು ತುಂತುರಿನ ಸೋನೆ

ಹಿತವಾಗಿ ನಾ ನೆನೆದು
ಸುಖವಾಗಿ ನಾನುಳಿದು
ಸದಾ ಅರಾಧಿಸುವೆ  ನಿನ್ನನೇ

ಈ ಬದುಕೆಂಬ ಯಾನದಲ್ಲಿ
ನೀನಿರಲು ಜೊತೆಯಲ್ಲಿ
ಒಂಟಿತನ ನನ್ನ ಬಿಟ್ಟು  ಓಡಿತು

ಇರುವವರೆಗೂ  ಒಲವಿಂದ
ಬದುಕಿಸಿದೆ ನಗುವಿಂದ
ನೀ ನನ್ನನ್ನು ಬೆರೆತು.               
- ಸುಭಾಷ್, ಸವಣೂರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...