ಸೋಮವಾರ, ಜನವರಿ 30, 2023

ವಂದನೆ (ಕವಿತೆ) - ಮಾಲತಿ ಮೇಲ್ಕೋಟೆ.

ವಂದನೆಯ ಸಲ್ಲಿಸುವೆ ನನ್ನಯಾ ಜೀವನಕೆ
ಸಂಧಿಸುವ ನಂಬಿಕೆಯು ಇಲ್ಲ ಮುಂದೆ

ನೀನಿತ್ತ ಎಲ್ಲವನು ನಗುತಲೆ‌ ಪಡೆದಿಹೆನು
ಏನೊಂದು ನನ್ನಲ್ಲಿ ನಿಲದೆಂದು ತಿಳಿದಿಹೆನು

ವಂದನೆಯ ಸಲ್ಲಿಸುವೆ ಕಷ್ಟದಾ ದಿನಗಳಿಗೆ
ಏಳಿಗೆಯ ದಾರಿಯಲಿ ನನ್ನ ನಡೆಸಿದವು

ವಂದನೆಯು ನನ್ನಯಾ ಮಿತಿಗಳಿಗು ಸಲ್ಲುವುದು
ಬೆಳೆಯುವ ಅವಕಾಶವನು ತಂದಿತ್ತುದಕ್ಕೆ

ಸಲಿಸುವೆನು ವಂದನೆಯ ಒಂದೊಂದು ಸವಾಲಿಗು 
ಬೆಳೆಸಿದವು ನನ್ನಲ್ಲಿ ಶಕ್ತಿಯುಕ್ತಿಗಳನು

ವಂದನೆಯ ಸಲ್ಲಿಸುವೆ  ನನ್ನೆಲ್ಲ ತಪ್ಪಿಗು
ಕಲಿಸಿದವು ಒಂದೊಂದು ಹೊಸ ಪಾಠಗಳನು
- ಮಾಲತಿ ಮೇಲ್ಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...