ಶುಕ್ರವಾರ, ಜನವರಿ 13, 2023

ಅಮೃತಗಂಗಾ (ಕವಿತೆ) - ಪ್ರಜ್ವಲ್ ಕುಮಾರ್ ಬಿ.ಕೆ, ಕೃಷ್ಣರಾಜಪೇಟೆ.

ದಮನಿಸಿ ದಮನಿಸಿ ಕುಣಿದಿಹ ಗಂಗಾ, 
ಕಾಂಚನ ಗಂಗ.
ಎತ್ತೆತ್ತಲು ಚೆಲ್ಲಿಹ ಪ್ರೇಮೋತ್ತುಂಗ.
ಲಹರಿಯ ಲಹರಿಸಿ, ಅಲೆಯಪ್ಪಳಿಸಿ
ನಾಟ್ಯ ಪ್ರದರ್ಶಿಸುತಿಹೆ,  ಎಂತ ಸೋಜಿಗ !
ಕುಣಿ-ಕುಣಿ, ತಣಿ -ತಣಿ, 
ಮಿಣಿ - ಮಿಣಿದು
ದಣಿವಾರಿಸೆ ಬಂದ ಅಮೃತಗಂಗಾ...

ಬರಡು ಭೂಮಿಯು ಕರೆಯುತಿರೆ, ಬಾ ನೀ ಬೇಗನೆ ಜಗದುಸಿರೆ.
ಹೊಳೆ - ಹೊಳೆವ ಮೇಘಮಾತೆ, ಪುಣ್ಯ ಪ್ರಧಾತೆ.
ಚಳ-ಚಳ ಜಳ-ಜಳ ವಿವಿಧ ನಾದದಿ, ಏರುವೆ ಗುಡ್ಡವ.
ಧುಮುಕುವೆ ಜಲಪಾತವ.
ಸೇರಲು ಮೇಘವ 
ತೀರಿಸೆ ದಾಹವ.
ಕಾಂಚನಗಂಗಾ ಎತ್ತೆತ್ತಲು ಚೆಲ್ಲಿಹೆ ನಿನ್ನೀ
ಪ್ರೇಮೋತ್ತುಂಗ.
ದಣಿವನಾರಿಸೆ ಬಂದ ಅಮೃತಗಂಗಾ.

ಕೇಳಲು ನೀರಿನ ಸಪ್ಪಳ ರಾಗ
ಕಾಣಲು ನಿನ್ನಯ ರಭಸದ ಓಘ,  ಸ್ಪರ್ಶಿಸೆ ನಿನ್ನನ್ನು ಎಂತ ಅಮೋಗ.
ನಾ ಅಮ್ಮನ ಮಗ, ನೀ ನನ್ನಯ ಜಗ.
ಕಾಂಚನಗಂಗಾ.
ಎತ್ತೆತ್ತಲು ಚೆಲ್ಲಿಹೆ ನಿನ್ನೀ
ಪ್ರೇಮೋತ್ತುಂಗ.
ದಣಿವನಾರಿಸಲು ಬಂದ ಅಮೃತಗಂಗಾ.
- ಪ್ರಜ್ವಲ್ ಕುಮಾರ್ ಬಿ.ಕೆ, ಕೃಷ್ಣರಾಜಪೇಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...