ಶುಕ್ರವಾರ, ಜನವರಿ 13, 2023

ಸಂಕ್ರಾಂತಿ (ಕವಿತೆ) - ನಾಝೀಮಾ, ಹಾಸನ.

ಸೂರ್ಯನ ಕರೆಗೆ ಓ..ಗೊಡುತ,
ಹೊಸತುಗಳ  ಆಲಂಗಿಸುತ,
 ಬದಲಾವಣೆಗಳ ಸ್ವೀಕರಿಸುತ
 ಬನ್ನಿ ಸಂಕ್ರಾಂತಿಯ ಆಚರಿಸೋಣ.

 ನಿತ್ಯವೂ ಸತ್ಯದಲೆ ಕಳೆಯುತ,
 ಎಳ್ಳುಬೆಲ್ಲವ ತಿನ್ನುತ,
ಸವಿಸವಿಯಾಗಿ  ಮಾತನಾಡುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.

 ದ್ವೇಷ-ಅಸೂಯೆ, ದುಃಖ-ದುಮ್ಮಾನ,
 ಮೇಲು-ಕೀಳು, ನಾನು ನೀನೆಂಬ
 ಅಹಂಭಾವವ ಗಾಳಿಗೆ ತೂರುತ,
 ನಲಿಯುತ, ಹಾಡುತ,  ಪಟವನು ಹಾರಿಸುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.
 - ನಾಝೀಮಾ, ಹಾಸನ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...